HEALTH TIPS

ರಾಜ್ಯಪಾಲರ ಪ್ರತಿಕೃತಿ ದಹಿಸಿದ ಎಸ್‍ಎಫ್‍ಐ ಮುಖಂಡರ ವಿರುದ್ಧ ಪ್ರಕರಣ; ರಾಜ್ಯಾಧ್ಯಕ್ಷ ಸೇರಿ 10 ಮಂದಿ ವಿರುದ್ಧ ಕ್ರಮ

                   ಕಣ್ಣೂರು: ಪಯ್ಯಂಬಲಂ ಬೀಚ್‍ನಲ್ಲಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರ ಪ್ರತಿಕೃತಿ ದಹಿಸಿದ ಘಟನೆಯಲ್ಲಿ ಎಸ್‍ಎಫ್‍ಐ ಮುಖಂಡರ ವಿರುದ್ಧ ಪ್ರಕರಣ ದಾಖಲಾಗಿದೆ.

              ಎಸ್‍ಎಫ್‍ಐ ರಾಜ್ಯಾಧ್ಯಕ್ಷೆ ಅನುಶ್ರೀ ಸೇರಿದಂತೆ ಹತ್ತು ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಕಣ್ಣೂರು ನಗರ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

             ಪಪ್ಪಾಯಿ ಆಕಾರದ 30 ಅಡಿ ಎತ್ತರದ ರಾಜ್ಯಪಾಲರ ಪ್ರತಿಕೃತಿ ಸುಡಲಾಗಿತ್ತು.  ರಾಜ್ಯಪಾಲರ ವಿರುದ್ಧದ ಪ್ರತಿಭಟನೆಯ ಮುಂದುವರಿದ ಭಾಗವಾಗಿ ಪ್ರತಿಕೃತಿ ದಹನ ಎಂಬುದು ಎಸ್‍ಎಫ್‍ಐ ವಿವರಣೆ. ಅಕ್ರಮ ಸಭೆ ಮತ್ತು ಗಲಭೆ ಯತ್ನ ಸೇರಿದಂತೆ ನಾಲ್ಕು ಆರೋಪಗಳನ್ನು ಅವರ ವಿರುದ್ಧ ಹೊರಿಸಲಾಗಿದೆ. ಎಸ್‍ಎಫ್‍ಐ ರಾಜ್ಯ ಕಾರ್ಯದರ್ಶಿ ಕೆ.ಅನುಶ್ರೀ, ಜಿಲ್ಲಾಧ್ಯಕ್ಷ ಪಿ.ಎಸ್.ಸಂಜೀವ್, ರಾಜ್ಯ ಕಾರ್ಯದರ್ಶಿ ವೈಷ್ಣವ್ ಮಹೇಂದ್ರನ್ ಸೇರಿದಂತೆ 10 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.

             ಇದೇ ವೇಳೆ, ಪ್ರತಿಭಟನೆ ವಿರುದ್ಧದ ಪ್ರಕರಣ ಸಹಜ ಹೆಜ್ಜೆ ಎಂದು ಎಸ್‍ಎಫ್‍ಐ ವಿವರಿಸಿದೆ. ನಿನ್ನೆ ರಾಜ್ಯಪಾಲರು ಎಸ್‍ಎಫ್‍ಐಗಳಿಗೆ ಸವಾಲ್ ಹಾಕಿದ್ದರು. ಬೀಚ್‍ನಲ್ಲಿ ಹೊಸ ವμರ್Áಚರಣೆ ವೇಳೆ ಎಸ್‍ಎಫ್‍ಐ ರಾಜ್ಯಪಾಲರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಿತು. ರಾಜ್ಯಪಾಲರು ವಿಶ್ವವಿದ್ಯಾನಿಲಯಗಳನ್ನು ಕಾವಿಮಯಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಎಸ್‍ಎಫ್‍ಐ ರಾಜ್ಯಪಾಲರ ವಿರುದ್ಧ ಬೃಹತ್ ಪ್ರತಿಭಟನೆ ನಡೆಸುತ್ತಿದೆ.

         ಕಾಲೇಜುಗಳಲ್ಲಿ ರಾಜ್ಯಪಾಲರ ವಿರುದ್ಧ ಎಸ್‍ಎಫ್‍ಐ ಬ್ಯಾನರ್ ಹಾಕಿತ್ತು. ರಾಜ್ಯಪಾಲರ ವಿರುದ್ಧ ಕಪ್ಪು ಬಾವುಟ ಪ್ರದರ್ಶನವೂ ನಡೆಯುತ್ತಿದೆ. 



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries