HEALTH TIPS

ಬೇಡಡ್ಕದಲ್ಲಿ ‘ಮಾ ಕೇರ್’ ಯೋಜನೆಗೆ ಚಾಲನೆ

                   ಮುಳ್ಳೇರಿಯ: ಶಾಲಾ-ಕಾಲೇಜು ಆವರಣಗಳಲ್ಲಿ ಹೆಚ್ಚುತ್ತಿರುವ ಮಾದಕ ವಸ್ತುಗಳ ಸೇವನೆಯಿಂದ ವಿದ್ಯಾರ್ಥಿಗಳನ್ನು ರಕ್ಷಿಸಲು ಕುಟುಂಬಶ್ರೀ ಮತ್ತು ಜಿಲ್ಲಾ ಪಂಚಾಯತಿ ಕೈಜೋಡಿಸಿ ಬೇಡಡ್ಕ ಗ್ರಾಮ ಪಂಚಾಯತಿಯು ‘ಮಾ ಕೇರ್’ ಯೋಜನೆಯನ್ನು ಆರಂಭಿಸಿದ್ದು, ಮಕ್ಕಳಿಗೆ ಅಗತ್ಯವಿರುವ ಕಲಿಕಾ ಸಾಮಗ್ರಿಗಳು ಮತ್ತು ಇತರ ವಸ್ತುಗಳನ್ನು ಒದಗಿಸಲು ಕಿಯೋಸ್ಕ್‍ಗಳನ್ನು ಶಾಲೆಯ ಒಳಗೆ ಲಭ್ಯವಾಗುವಂತೆ ಮಾಡಲಾಗುವುದು.

               ಕುಂಡಂಗುಳಿ ಜಿಎಚ್ ಎಸ್ ಶಾಲೆಯಲ್ಲಿ ಕಿಯೋಸ್ಕ್ ಸ್ಥಾಪಿಸಲಾಗಿದೆ. ಮಾ-ಕೇರ್‍ನಲ್ಲಿ ನ್ಯೂಟ್ರಿಮಿಕ್ಸ್ ಆಹಾರಗಳೂ ಲಭ್ಯವಿರುತ್ತವೆ. ಇದಕ್ಕಾಗಿ ಶಾಲೆಗಳಲ್ಲಿ 300 ಚದರ ಅಡಿ ಕಟ್ಟಡ ನಿರ್ಮಿಸಲಾಗಿದೆ. ಮಾ ಕೇರ್ ಅನ್ನು ಸಾಹಸೋದ್ಯಮ ಘಟಕವಾಗಿ ಪ್ರಾರಂಭಿಸಲಾಯಿತು. 7 ಲಕ್ಷ ವೆಚ್ಚದಲ್ಲಿ ಯೋಜನೆಗೆ ಚಾಲನೆ ನೀಡಲಾಗಿದೆ. ಈ ಪೈಕಿ ಜಿಲ್ಲಾ ಪಂಚಾಯಿತಿ ವತಿಯಿಂದ 3.5 ಲಕ್ಷ ಸಹಾಯಧನ ನೀಡಲಾಗುವುದು. ಜಿಲ್ಲೆಯ ಕಿನಾನೂರ್ ಕರಿಂದಳ ಪಂಚಾಯತಿಯ ಚಾಯೋತ್ ಶಾಲೆಯಲ್ಲಿ ಮಾ ಕೇರ್ ಯೋಜನೆಯನ್ನು ಪ್ರಥಮ ಬಾರಿಗೆ ಈಗಾಗಲೇ ಜಾರಿಗೊಂಡಿದೆ. 


              ಹದಿಹರೆಯದವರಲ್ಲಿ ಮಾದಕ ವ್ಯಸನವನ್ನು ಸಂಪೂರ್ಣವಾಗಿ ತೊಡೆದುಹಾಕುವ ಉದ್ದೇಶದಿಂದ ಸರ್ಕಾರ ಜಾರಿಗೊಳಿಸಿರುವ ಕುಟುಂಬಶ್ರೀ ಜಿಲ್ಲಾ ಮಿಷನ್‍ನ ವಿಮುಕ್ತಿ, ಯೋಧಾವ್  ಮತ್ತು ಸುರಕ್ಷಾಶ್ರೀ ಯೋಜನೆಗಳ ಮುಂದುವರಿದ ಭಾಗವಾಗಿ ಮಾ ಕೇರ್ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ. ಮಧ್ಯಾಹ್ನ ಮತ್ತು ಇತರ ವಿರಾಮದ ಸಮಯದಲ್ಲಿ ಮಕ್ಕಳು ವಿವಿಧ ಉದ್ದೇಶಗಳಿಗಾಗಿ ಶಾಲೆಯ ಹೊರಗಿನ ಅಂಗಡಿಗಳಿಗೆ ಹೋಗುತ್ತಾರೆ. ಈ ಸಂದರ್ಭಗಳ ಲಾಭವನ್ನು ಡ್ರಗ್ ಲಾಬಿಗಳು ಬಳಸಿಕೊಳ್ಳುತ್ತಿವೆ. ಇದನ್ನು ತಪ್ಪಿಸಲು ಮಾ-ಕೇರ್ ಯೋಜನೆಯ ಮೂಲಕ ಮಕ್ಕಳಿಗೆ ಅಗತ್ಯವಿರುವ ಕಲಿಕಾ ಸಾಮಗ್ರಿಗಳು ಹಾಗೂ ಇತರೆ ಸಾಮಗ್ರಿಗಳನ್ನು ಶಾಲೆಯಲ್ಲೇ ಲಭ್ಯವಾಗುವಂತೆ ಮಾಡುವುದು ಈ ಯೋಜನೆಯ ಮಹತ್ವಿಕೆಯಾಗಿದೆ. 

ಬೇಡಡ್ಕದಲ್ಲಿ ಮಾ ಕೇರ್ ಸೆಂಟರ್ ಉದ್ಘಾಟನೆ:

               ಬೇಡಡ್ಕ ಗ್ರಾ.ಪಂ.ನಲ್ಲಿ ಮಾ ಕೇರ್ ಸೆಂಟರ್ ಯೋಜನೆ ಆರಂಭವಾಗಿದೆ. ಜಿಲ್ಲಾ ಪಂಚಾಯಿತಿ ಆರೋಗ್ಯ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಎಸ್.ಎನ್.ಸರಿತಾ ಉದ್ಘಾಟಿಸಿದರು. ಕಾರಡ್ಕ ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷೆ ಕೆ.ರಮಣಿ ಅಧ್ಯಕ್ಷತೆ ವಹಿಸಿದ್ದರು. ಕುಟುಂಬಶ್ರೀ ಮತ್ತು ಜಿಲ್ಲಾ ಪಂಚಾಯಿತಿಯಿಂದ ಈ ಯೋಜನೆ ಅನುಷ್ಠಾನಗೊಂಡಿದೆ.

            ಬೇಡಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎಂ.ಧನ್ಯ ಪುಸ್ತಕ ಮಳಿಗೆ ಉದ್ಘಾಟಿಸಿದರು. ಹಸಿರು ಕ್ರಿಯಾಸೇನೆಗೆ ಚಾಲನಾ ತರಬೇತಿಯನ್ನೂ ಆಯೋಜಿಸಲಾಗಿತ್ತು. ಕುಟುಂಬಶ್ರೀ ಜಿಲ್ಲಾ ಮಿಷನ್ ಎಡಿಎಂಸಿ ಹರಿದಾಸ್ ಚಾಲನಾ ತರಬೇತಿಯನ್ನು ಉದ್ಘಾಟಿಸಿದರು.

             ಬೇಡಡ್ಕ ಗ್ರಾಮ ಪಂಚಾಯಿತಿ ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ವರದರಾಜ್, ಕುಟುಂಬಶ್ರೀ ಜಿಲ್ಲಾ ಮಿಷನ್ ಎಡಿಎಂಸಿ ಸಿ.ಎಚ್.ಇಕ್ಬಾಲ್, ಬೇಡಡ್ಕÀ ಗ್ರಾಮ ಪಂಚಾಯಿತಿ ಸದಸ್ಯರಾದ ಟಿ.ಪಿ.ಗೋಪಾಲನ್, ಬಿ.ಎಲ್.ನೂರ್ಜಹಾನ್, ಶಾಂತಕುಮಾರಿ, ಡಿ.ವತ್ಸಲಾ ಮತ್ತು ಕೆ.ರಘುನಾಥನ್, ಅಶೋಕ, ಕೇರಳ ಬ್ಯಾಂಕ್ ಕುಂಡಂಗುಳಿ ಶಾಖಾ ವ್ಯವಸ್ಥಾಪಕಿ ಪಿ.ವಿ.ರಮಣಿ, ಕುಂಡಂಗುಳಿ ಜಿಎಚ್‍ಎಸ್‍ಎಸ್ ಶಾಲಾ ಪಿಟಿಎ ಅಧ್ಯಕ್ಷ ಎಂ.ಮಾಧವನ್, ಎಸ್‍ಎಂಸಿ ಅಧ್ಯಕ್ಷ ಪಿ.ಕೆ.ಗೋಪಾಲನ್, ಸಿಬ್ಬಂದಿ ಕಾರ್ಯದರ್ಶಿ ಪ್ರಶಾಂತ್ ಪಾಯಂ, ಮದರ್ ಪಿಟಿಎ ಅಧ್ಯಕ್ಷೆ ವಿ.ಪಿ.ವೀಣಾ ಕುಮಾರಿ ಮಾತನಾಡಿದರು. ಬೇಡಡ್ಕ ಗ್ರಾಮ ಪಂಚಾಯಿತಿ ಸಿಡಿಎಸ್ ಅಧ್ಯಕ್ಷೆ ಎಂ.ಗುಲಾಬಿ ಸ್ವಾಗತಿಸಿ, ಬೇಡಡ್ಕ ಗ್ರಾಮ ಪಂಚಾಯಿತಿ ಸದಸ್ಯ ಕಾರ್ಯದರ್ಶಿ ಗಂಗಾಧರನ್ ವಂದಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries