HEALTH TIPS

"ಕೇಕ್, ವೈನ್ ಮತ್ತು ಥ್ರಿಲ್ಸ್"; ಬಿಷಪ್‍ಗಳ ವಿರುದ್ಧದ ವಿವಾದಾತ್ಮಕ ಹೇಳಿಕೆಗೆ ಕ್ಷಮೆಯಾಚಿಸಿದ ಸಾಜಿ ಚೆರಿಯನ್

                ತಿರುವನಂತಪುರ: ಕ್ರಿಸ್‍ಮಸ್ ದಿನದಂದು ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಔತಣ ಕೂಟದಲ್ಲಿ ಪಾಲ್ಗೊಂಡಿದ್ದ ಕ್ರೈಸ್ತ ಧರ್ಮಗುರುಗಳನ್ನು ಅಣಕಿಸಿದ ಘಟನೆಗೆ ಸಚಿವ ಸಾಜಿ ಚೆರಿಯನ್ ವಿಷಾದ ವ್ಯಕ್ತಪಡಿಸಿದ್ದಾರೆ.

             ಕ್ರೈಸ್ತರಿಗೆ ತೊಂದರೆ ಉಂಟು ಮಾಡಿದ ಹೇಳಿಕೆಯನ್ನು ಹಿಂಪಡೆಯುತ್ತಿರುವುದಾಗಿ ಸಾಜಿ ಚೆರಿಯನ್ ಘೋಷಿಸಿದರು. ವೈನ್, ಕೇಕ್ ಮತ್ತು ಥ್ರಿಲ್ ಅನ್ನು ಉಲ್ಲೇಖಿಸಿ ಚರ್ಚ್ ನಾಯಕರನ್ನು ಲೇವಡಿ ಮಾಡಿದ ಟೀಕೆಯನ್ನು ಸಾಜಿ ಚೆರಿಯನ್ ಹಿಂಪಡೆದಿದ್ದಾರೆ.

              ಕೆಸಿಬಿಸಿ ಕೂಡ ಸಚಿವರ ವಿರುದ್ಧ ತೀವ್ರ ಟೀಕೆ ಮಾಡಿತ್ತು. ಬಿಜೆಪಿ ಮತ್ತು ಅಲ್ಪಸಂಖ್ಯಾತ ಮೋರ್ಚಾ ನೇತೃತ್ವದಲ್ಲಿ ಚೆಂಗನ್ನೂರಿನಲ್ಲಿ ಸಚಿವರ ಪ್ರತಿಕೃತಿ ದಹಿಸಿ ಸಾಜಿ ಚೆರಿಯನ್ ರಾಜೀನಾಮೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಈ ಮಾತು ಭಾರೀ ವಿವಾದಕ್ಕೆ ತಿರುಗುತ್ತಿದ್ದಂತೆ ಸಾಜಿ ಚೆರಿಯನ್ ವಿμÁದ ವ್ಯಕ್ತಪಡಿಸಿದರು. 

      ತಮ್ಮ ರಾಜಕೀಯ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಮತ್ತು ತಾವು ಜಾತ್ಯತೀತವಾದಿ ಎಂದು ಪುನರುಚ್ಚರಿಸಿದ ಸಾಜಿ ಚೆರಿಯನ್, ನೋವುಂಟಾದರೆ ನನ್ನ ಹೇಳಿಕೆಯ ಯಾವುದೇ ಭಾಗವನ್ನು ಹಿಂಪಡೆಯುವುದಾಗಿ ಹೇಳಿದರು. ಪಕ್ಷದ ಸೂಚನೆಯಂತೆ ಹೇಳಿಕೆಯನ್ನು ಹಿಂಪಡೆದಿಲ್ಲ ಎಂದು ಸಾಜಿ ಚೆರಿಯನ್ ಹೇಳಿದ್ದಾರೆ. ಯಾರನ್ನೂ ವೈಯಕ್ತಿಕವಾಗಿ ನಿಂದಿಸಿಲ್ಲ. ಬಿಷಪ್‍ಗಳು ಹೆಚ್ಚು ಜಾಗೃತರಾಗುವ ಉದ್ದೇಶ ಹೊಂದಿರುವುದಾಗಿ ಸಚಿವರು ವಿವರಿಸಿದರು.

             ಪ್ರಧಾನಿಯವರ ಕ್ರಿಸ್‍ಮಸ್ ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ಬಿಷಪ್‍ಗಳು ದ್ರಾಕ್ಷಿ, ಕೇಕ್ ಕತ್ತರಿಸುವಾಗ ಉಳಿದದ್ದೆಲ್ಲವನ್ನೂ ಮರೆತು ರೋಮಾಂಚನಗೊಂಡರು ಎಂಬುದು ಸಾಜಿ ಚೆರಿಯನ್ ಅವರ ಹೇಳಿಕೆಯಾಗಿತ್ತು.  ಕ್ರಿಶ್ಚಿಯನ್ನರು ಯಾವ ರಾಜಕೀಯವನ್ನು ಅಳವಡಿಸಿಕೊಳ್ಳಬೇಕು ಎಂದು ನಿರ್ಧರಿಸಬಾರದು, ಇತರ ರಾಜಕೀಯ ಪಕ್ಷಗಳಂತಲ್ಲ ಬಿಜೆಪಿ ಎಂದು ಕೆಸಿಬಿಸಿ ಹೇಳಿದೆ. ಮತ್ತು ಸಾಜಿ ಚೆರಿಯನ್ ಅವರಿಂದ ತುಂಬಾ ನಿರೀಕ್ಷಿಸಲಾಗಿತ್ತು ಎಂದು ಟೀಕಿಸಿತ್ತು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries