HEALTH TIPS

ಎಸ್ ಎಫ್ ಐಗಳು ವಾಹನ ನಿಲ್ಲಿಸಿದರೆ ಪ್ರತಿಭಟನೆಗೆ ಮುಂದಾಗಿ ದಾಳಿ ನಡೆಸುತ್ತಾರೆ: ರಾಜ್ಯದಲ್ಲಿ ಪೋಲೀಸ್ ನಿಯಂತ್ರಣ ಸಿಪಿಎಂ ಮುಷ್ಠಿಯಲ್ಲಿ: ರಾಜ್ಯಪಾಲ

               ನವದೆಹಲಿ: ಕೇರಳದಲ್ಲಿ ಪೋಲೀಸರನ್ನು ಸಿಪಿಎಂ ನಿಯಂತ್ರಿಸುತ್ತಿದೆ ಎಂದು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಹೇಳಿದ್ದಾರೆ. ಸಚಿವರ ಆಪ್ತ ಸಿಬ್ಬಂದಿಯ ಪಿಂಚಣಿ ರದ್ದು ಮಾಡುವಂತೆ ಹಲವು ಬಾರಿ ಹೇಳಿರುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ. 

              ಅವರು ದೆಹಲಿಯಲ್ಲಿ ನಿನ್ನೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುತ್ತಿದ್ದರು.

            ಎರಡು ವರ್ಷಗಳಿಂದ ವೈಯಕ್ತಿಕ ಸಿಬ್ಬಂದಿಯಾಗಿರುವವರೂ ಪಿಂಚಣಿ ಪಡೆಯುತ್ತಿದ್ದಾರೆ. ಆದರೆ ರಾಜ್ಯದಲ್ಲಿ 35 ವರ್ಷ ಸೇವೆ ಸಲ್ಲಿಸಿದವರಿಗೆ ಪಿಂಚಣಿ ಸಿಗದ ಪರಿಸ್ಥಿತಿ ಇದೆ ಎಂದು ಆರೀಫ್ ಮಹಮ್ಮದ್ ಖಾನ್ ಹೇಳಿದರು.

            ಎಸ್‍ಎಫ್‍ಐ ಕಾರ್ಯಕರ್ತರು ವಾಹನ ತಡೆಯಲು ಸಾಲುಗಟ್ಟಿ ನಿಲ್ಲುತ್ತಾರೆ. ಕಾರಿನ ಮೇಲೆ ದಾಳಿ ಮಾಡಲು ಯಾರಿಗೂ ಅವಕಾಶವಿಲ್ಲ. ಪ್ರಯಾಣದ ಮಾರ್ಗವನ್ನು ಬದಲಾಯಿಸುವುದು ತಮಾಶೆಯಲ್ಲ. ಪ್ರಯಾಣ ಮಾರ್ಗವನ್ನು ಪೋಲೀಸರು ನಿರ್ಧರಿಸುತ್ತಾರೆ. ನೂತನ ಸಚಿವರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಎಲ್ಲರಿಗೂ ಶುಭಾಶಯ ಕೋರಿರುವುದಾಗಿ ರಾಜ್ಯಪಾಲರು ತಿಳಿಸಿದ್ದಾರೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries