ಕೊಚ್ಚಿ: ಈ ವಷರ್Àದ ಮಧ್ಯಭಾಗದಲ್ಲಿ ಕೊಚ್ಚಿಯಲ್ಲಿ ಅಂತಾರಾಷ್ಟ್ರೀಯ ಕೃತಕ ಬುದ್ಧಿಮತ್ತೆ ಶೃಂಗಸಭೆ ಆಯೋಜಿಸಲಾಗುವುದು ಎಂದು ಕೈಗಾರಿಕಾ ಸಚಿವ ಪಿ.ರಾಜೀವ್ ತಿಳಿಸಿದರು.
ಎಐ ಶೃಂಗಸಭೆಯನ್ನು ಕೈಗಾರಿಕೆ ಮತ್ತು ಐಟಿ ಇಲಾಖೆಗಳು ಜಂಟಿಯಾಗಿ ಆಯೋಜಿಸಲಿವೆ. ಶೃಂಗಸಭೆಯು ಕೊಚ್ಚಿಯ ಸಿದ್ಧತೆಗಳು ಮತ್ತು ದೇಶದ ಎಐ ಹಬ್ ಆಗುವ ಸಾಮಥ್ರ್ಯವನ್ನು ಪ್ರದರ್ಶಿಸಲಿದೆ.
ಕೊಚ್ಚಿ ಹಬ್ ಜನರಿಕ್ ಎಐ ಅನ್ನು ಮೀರಿ ಜನರೇಟಿವ್ ಎಐ ಪರಿಕಲ್ಪನೆಯನ್ನು ಮುಂದಿಡುತ್ತಿದೆ ಎಂದು ಸಚಿವ ರಾಜೀವ್ ಹೇಳಿದರು. ಬೋಯಿಂಗ್ನಂತಹ ಜಾಗತಿಕ ದೈತ್ಯರು ಐಬಿಎಂ ನ ಎಐ ಸೇವೆಗಳನ್ನು ಬಳಸುತ್ತಾರೆ. ಎಐ ಶೃಂಗಸಭೆಗೆ ಬೋಯಿಂಗ್ ಸೇರಿದಂತೆ ಪ್ರಾತಿನಿಧ್ಯವನ್ನು ತರಲು ಸರ್ಕಾರ ಪ್ರಯತ್ನಿಸುತ್ತಿದೆ ಎಂದು ಅವರು ಹೇಳಿದರು.
ಎಐ ಶೃಂಗಸಭೆಯನ್ನು ಕೆ.ಎಸ್.ಐ.ಡಿ.ಸಿ ಆಯೋಜಿಸುತ್ತದೆ. ರಾಜ್ಯದಲ್ಲಿ ಐಟಿ ಪಾರ್ಕ್ಗಳು, ಸ್ಟಾರ್ಟ್ಅಪ್ ಮಿಷನ್, ಡಿಜಿಟಲ್ ವಿಶ್ವವಿದ್ಯಾಲಯ, ತಾಂತ್ರಿಕ ವಿಶ್ವವಿದ್ಯಾಲಯ ಇತ್ಯಾದಿಗಳ ಸಹಯೋಗ ಇರುತ್ತದೆ.
ಕೊಚ್ಚಿಯನ್ನು ಎಐ ಹಬ್ ಮಾಡುವ ಮೊದಲ ಹೆಜ್ಜೆಯಾಗಿ ಕೈಗಾರಿಕೆ ಸಚಿವರು ಮತ್ತು ಅಧಿಕಾರಿಗಳು Iಃಒ ಸಾಫ್ಟ್ವೇರ್ ಪ್ರತಿನಿಧಿಗಳನ್ನು ಭೇಟಿ ಮಾಡಿದರು. ಐಬಿಎಂನ ಹಿರಿಯ ಉಪಾಧ್ಯಕ್ಷ ದಿನೇಶ್ ನಿರ್ಮಲ್ ಅವರೊಂದಿಗೆ ನಡೆದ ಚರ್ಚೆಯಲ್ಲಿ ಕೊಚ್ಚಿಯಲ್ಲಿ ಕಂಪನಿಯ ಎಐ ತಂತ್ರಜ್ಞಾನ ಹಬ್ ಆರಂಭಿಸಲು ತಾತ್ವಿಕವಾಗಿ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕೈಗಾರಿಕೆ ಸಚಿವರ ಕಚೇರಿ ತಿಳಿಸಿದೆ.
ಕೊಚ್ಚಿ ಐಬಿಎಂನ ಎಐ ಹಬ್ ಆಗುವುದರೊಂದಿಗೆ ವಿಶ್ವದ ಅತ್ಯುತ್ತಮ ಎಐ ವೃತ್ತಿಪರರು ಕೊಚ್ಚಿಗೆ ಬರಲಿದ್ದಾರೆ ಎಂದು ಕೈಗಾರಿಕಾ ಸಚಿವರು ಹೇಳಿದರು. ಇತರ ಜಾಗತಿಕ ಐಟಿ ಕಂಪನಿಗಳು ಇದೇ ರೀತಿ ಯೋಚಿಸುತ್ತವೆ. ಹೊಸ ಐಟಿ ಪೀಳಿಗೆಗೂ ಇದು ತುಂಬಾ ಪ್ರಯೋಜನಕಾರಿಯಾಗಲಿದೆ. ಇನ್ಫೋಪಾರ್ಕ್ ಮತ್ತು ಸ್ಮಾರ್ಟ್ ಸಿಟಿಯ ಎರಡನೇ ಹಂತವು ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಲು ಸಮರ್ಥವಾಗಿದೆ ಎಂದು ಅವರು ಹೇಳಿದರು.