ತಿರುವನಂತಪುರ: ರಾಜ್ಯದ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಗಳ ಕೊರತೆ ತೀವ್ರವಾಗಿದ್ದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಔಷಧಾಲಯಗಳಲ್ಲಿ ಅಗತ್ಯ ತುರ್ತು ಔಷಧಿಗಳು ಲಭಿಸದ ಕಾರಣ ರೋಗಿಗಳು ಹೊರಗಿನಿಂದ ಔಷಧ ಖರೀದಿಸಬೇಕಾದ ಪರಿಸ್ಥಿತಿ ಎದುರಾಗಿದೆ. ಸರ್ಕಾರವು ಔಷಧ ಕಂಪನಿಗಳಿಗೆ ಹಣ ಪಾವತಿಸದ ಕಾರಣ ಔಷಧಾಲಯಗಳಲ್ಲಿ ಔಷಧ ಕೊರತೆ ಉಂಟಾಗಿದೆ. ರೋಗಿಗಳು ಹಾಗೂ ಆರೋಗ್ಯ ಇಲಾಖೆಗೆ ದೂರು ನೀಡಿದರೂ ಸರ್ಕಾರ ಕಂಡೂ ಕಾಣದಂತಿದೆ.
ಔಷಧ ಕಂಪನಿಗಳಿಗೆ ನೀಡಬೇಕಾದ ಬಾಕಿ 50 ಕೋಟಿ ರೂ.ಎಮದು ತಿಳಿದುಬಂದಿದೆ ಆದರೆ ಈ ಹಣ ಬಿಡುಗಡೆ ಮಾಡಲು ಹಣಕಾಸು ಇಲಾಖೆ ಇನ್ನೂ ಸಿದ್ಧವಾಗಿಲ್ಲ. ಹಣಕಾಸು ಇಲಾಖೆ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ಬಿಲ್ಗಳನ್ನು ನಿರ್ಧರಿಸಲು ಸಮಯ ಬೇಕಾಗುತ್ತದೆ ಎಂದು ಹೇಳುತ್ತದೆ.
ಸರ್ಕಾರದಿಂದ 500 ಕೋಟಿಗೂ ಹೆಚ್ಚು ಹಣ ಪಡೆಯಬೇಕು ಎಂಬ ಕಾರಣಕ್ಕೆ ಕಂಪನಿಗಳು ಆಸ್ಪತ್ರೆಗಳಿಗೆ ಔಷಧ ಪೂರೈಕೆಯನ್ನು ಕಡಿಮೆ ಮಾಡಿವೆ. ಕಳೆದ ಆರ್ಥಿಕ ವರ್ಷದಲ್ಲಿ ಸರ್ಕಾರದಿಂದ 200 ಕೋಟಿ ರೂಪಾಯಿ ಬಾಕಿ ಇದೆ. ನವೆಂಬರ್ ಅಂತ್ಯದಲ್ಲಿ ಆರೋಗ್ಯ ಇಲಾಖೆಯ ಒತ್ತಡಕ್ಕೆ ಮಣಿದು ಹಣಕಾಸು ಇಲಾಖೆ 120 ಕೋಟಿ ರೂ.ನೀಡಿತ್ತು. ಇದರಲ್ಲಿ 40 ಕೋಟಿ ರೂ.ಗಳ ಬಿಲ್ ಗಳು ಖಜಾನೆಯಿಂದ ಪಾಸ್ ಆಗಿವೆ. 50 ಕೋಟಿ ಬಿಲ್ ಸಲ್ಲಿಸಿದರೂ ಅನುಮೋದನೆ ಲಭಿಸಿಲ್ಲ.





