HEALTH TIPS

ಕೇಂದ್ರದ ವಿರುದ್ಧ ಕೇರಳ ಸರ್ಕಾರದ ಗೊತ್ತುವಳಿಗೆ ಅಂಗೀಕಾರ

            ತಿರುವನಂತಪುರ: ರಾಜ್ಯವನ್ನು ಆರ್ಥಿಕವಾಗಿ ದುರ್ಬಲಗೊಳಿಸುವ ಮೂಲಕ ಸಹಕಾರ ತತ್ವವನ್ನು ನಾಶ ಮಾಡಲಾಗಿದೆ ಎಂದು ಆರೋಪಿಸಿ ಕೇರಳ ಸರ್ಕಾರವು ಕೇಂದ್ರ ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಗುರುವಾರ ಗೊತ್ತುವಳಿಯನ್ನು ‌ಅಂಗೀಕರಿಸಿದೆ.

         ಸದನದಲ್ಲಿ ವಿರೋಧ ಪಕ್ಷದ ಗೈರುಹಾಜರಿಯ ನಡುವೆಯೂ, ಗೊತ್ತುವಳಿಯು ಸರ್ವಾನುಮತದಿಂದ ಅಂಗೀಕಾರಗೊಂಡಿದೆ ಎಂದು ಸ್ಪೀಕರ್ ಎ.ಎನ್‌ ಶಮ್ಶೀರ್‌ ಘೋಷಣೆ ಮಾಡಿದ್ದಾರೆ.

             ಗೊತ್ತುವಳಿಯನ್ನು ಮಂಡಿಸಿದ ಹಣಕಾಸು ಸಚಿವ ಕೆ.ಎನ್‌ ಗೋಪಾಲ್‌ ಅವರು, ' ಹಣಕಾಸು ಆಯೋಗದ ಸಲಹೆಗಳನ್ನು ನಿರಾಕರಿಸಿರುವ ಕೇಂದ್ರವು ಕೇರಳದ ಖರೀದಿ ಮಿತಿಯನ್ನು ಕಡಿಮೆಗೊಳಿಸಿದೆ ಮತ್ತು ಕಂದಾಯ ಕೊರತೆ ಅನುದಾನಕ್ಕೆ ಕತ್ತರಿ ಹಾಕಿದೆ' ಎಂದು ಆರೋಪಿಸಿದರು.

             'ಕೇಂದ್ರ ಸರ್ಕಾರದ ಚಟುವಟಿಕೆಗಳು ದೇಶದ ಸಹಕಾರಿ ತತ್ವಕ್ಕೆ ಗಾಸಿಗೊಳಿಸುತ್ತಿವೆ. ಕೆಲವೊಂದು ವಿಚಾರಗಳಲ್ಲಿ ಕೇಂದ್ರ ಸರ್ಕಾರಕ್ಕೆ ಸಂಪೂರ್ಣ ಅಧಿಕಾರ ಇದೆ. ಹಾಗೆಯೇ ಸಂವಿಧಾನವು ರಾಜ್ಯಗಳಿಗೂ ಕೆಲವೊಂದು ವಿಚಾರಗಳಲ್ಲಿ ಸಂಪೂರ್ಣ ಅಧಿಕಾರವನ್ನು ನೀಡಿದೆ' ಎಂದು ತಿಳಿಸಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries