HEALTH TIPS

ಕುಸಾಟ್ ದುರಂತಕ್ಕೆ ಪ್ರಾಂಶುಪಾಲರೇ ಹೊಣೆ ಎಂದು ನ್ಯಾಯಾಲಯದಲ್ಲಿ ಪುನರುಚ್ಚರಿಸಿದ ಸರ್ಕಾರ

               ಎರ್ನಾಕುಳಂ: ಕುಸಾಟ್ ದುರಂತಕ್ಕೆ ಪ್ರಾಂಶುಪಾಲರೇ ಹೊಣೆ ಎಂದು ರಾಜ್ಯ ಸರ್ಕಾರ ಪುನರುಚ್ಚರಿಸಿದೆ. ಟೆಕ್ ಫೆಸ್ಟ್ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮಕ್ಕಳಿಗೇ ನೀಡಲಾಗಿದೆ ಎಂದು ಸರ್ಕಾರ ನ್ಯಾಯಾಲಯದಲ್ಲಿ ಹೇಳಿದೆ. ವ್ಯವಸ್ಥೆಗಳ ವೈಫಲ್ಯವೇ ಅನಾಹುತಕ್ಕೆ ಕಾರಣ ಎಂದು ನ್ಯಾಯಾಲಯದ ಗಮನಸೆಳೆದಿದೆ.

          ಪೋಲೀಸ್ ರಕ್ಷಣೆ ಕೋರಿ ಮಾಜಿ ಪ್ರಾಂಶುಪಾಲರು ಕಳುಹಿಸಿರುವ ಪತ್ರದ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸುವಂತೆ ರಿಜಿಸ್ಟ್ರಾರ್‍ಗೆ ನ್ಯಾಯಾಲಯ ಸೂಚಿಸಿದೆ. ಈ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ವಿಶ್ವವಿದ್ಯಾಲಯಕ್ಕೆ ನ್ಯಾಯಾಲಯ ಸೂಚಿಸಿದೆ.

          ಇದಕ್ಕೂ ಮುನ್ನ, ಸಭಾಂಗಣಕ್ಕೆ ಸ್ಥಳಾವಕಾಶಕ್ಕಿಂತ ಹೆಚ್ಚಿನ ಜನರನ್ನು ಸೇರಿಸಿಕೊಂಡಿದ್ದರಿಂದ ಕುಸ್ಯಾಟ್ ದುರಂತ ಸಂಭವಿಸಿದೆ ಎಂದು ಪೋಲೀಸರು ಹೈಕೋರ್ಟ್‍ನಲ್ಲಿ ವಿವರಿಸಿದರು. 1,000 ಜನರಿಗೆ ಅವಕಾಶ ಇರುವ ಸಭಾಂಗಣದಲ್ಲಿ 4,000 ಜನರು ಬಂದಿದ್ದರು. ಸಂಗೀತ ಕಾರ್ಯಕ್ರಮಕ್ಕೆ ಕ್ಯಾಂಪಸ್‍ನ ಹೊರಗಿನವರು ಭಾಗವಹಿಸಿದ್ದು ದುರಂತಕ್ಕೆ ಕಾರಣವಾಯಿತು. ಭಾಗವಹಿಸುವವರ ಸಂಖ್ಯೆಯನ್ನು ಸಂಘಟಕರು ಊಹಿಸಲು ಸಾಧ್ಯವಿಲ್ಲ ಎಂದು ಪೋಲೀಸರು ನ್ಯಾಯಾಲಯಕ್ಕೆ ತಿಳಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries