HEALTH TIPS

ನೀತಿ ಸಂಹಿತೆ ಉಲ್ಲಂಘನೆಗಳ ವರದಿ ಮಾಡಲು ಸಾರ್ವಜನಿಕರಿಗೆ ಸಿ-ವಿಜಿಲ್ ಅಪ್ಲಿಕೇಶನ್: ಜಿಲ್ಲೆಯಲ್ಲಿ ಇದುವರೆಗೆ 17 ದೂರುಗಳು ದಾಖಲು

                   ಕಾಸರಗೋಡು: ಲೋಕಸಭೆ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಉಲ್ಲಂಘನೆ ಸೇರಿದಂತೆ ಚುನಾವಣಾ ಸಂಬಂಧಿತ ದೂರುಗಳು ಮತ್ತು ಅಕ್ರಮಗಳ ಬಗ್ಗೆ ವರದಿ ಮಾಡಲು ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಮೊಬೈಲ್ ಸಿವಿಐಎಲ್ ಆ್ಯಪ್ (ಸಿ-ವಿಜಿಲ್)ಮೂಲಕ ಜಿಲ್ಲೆಯಲ್ಲಿ 17 ದೂರುಗಳು ಬಂದಿವೆ. ಈ ಪೈಕಿ 15 ದೂರುಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. ಎರಡು ಅಪೂರ್ಣ ದೂರುಗಳನ್ನು ಕೈಬಿಡಲಾಗಿದೆ. ತ್ರಿಕರಿಪುರ ಕ್ಷೇತ್ರದಿಂದ ಒಂಬತ್ತು ದೂರುಗಳು ಬಂದಿವೆ. ಕಾಸರಗೋಡು ಕ್ಷೇತ್ರದಿಂದ ತಲಾ ಒಂದು ಹಾಗೂ ಉದುಮ ಮತ್ತು ಕಾಞಂಗಾಡು ಕ್ಷೇತ್ರದಿಂದ ನಾಲ್ಕು ದೂರುಗಳು ಬಂದಿವೆ. ಮಂಜೇಶ್ವರ ಕ್ಷೇತ್ರದಿಂದ ಇದುವರೆಗೆ ಯಾವುದೇ ದೂರುಗಳು ಬಂದಿಲ್ಲ.

                  ಮಾರ್ಚ್ 16ರ ಸಂಜೆ ಚುನಾವಣಾ ಅಧಿಸೂಚನೆ ಬಂದ ನಂತರ ಜಿಲ್ಲೆಯಲ್ಲಿ ಸಿ ಜಿಲ್ ಆ್ಯಪ್ ಕಾರ್ಯನಿರ್ವಹಣೆ ಆರಂಭಗೊಂಡಿದೆ. ಕಂಟ್ರೋಲ್ ರೂಂ ನೋಡಲ್ ಅಧಿಕಾರಿ ಕೆ.ವಿ.ಶ್ರುತಿ ಮಾತನಾಡಿ, ಸÀರ್ಕಾರಿ ಸ್ವಾಮ್ಯದ ಜಾಗದಲ್ಲಿ ಇದುವರೆಗೆ ಗೋಡೆ ಬರಹ, ಪ್ರಚಾರದ ಪೆÇೀಸ್ಟರ್, ಫ್ಲಕ್ಸ್ ಗಳನ್ನು ಅಕ್ರಮವಾಗಿ ಅಂಟಿಸುವುದರ ವಿರುದ್ಧ ದೂರುಗಳು ಬಂದಿವೆ ಎಂದಿರುವರು.

                  ಲೋಕಸಭೆ ಚುನಾವಣೆಗೆ ಸಂಬಂಧಿಸಿದ ನೀತಿ ಸಂಹಿತೆ ಉಲ್ಲಂಘನೆ ಸೇರಿದಂತೆ ದೂರುಗಳು ಮತ್ತು ಅಕ್ರಮಗಳ ಬಗ್ಗೆ ಸಾರ್ವಜನಿಕರು cVIGIL  ಅಪ್ಲಿಕೇಶನ್ ಮೂಲಕ ವರದಿ ಮಾಡಬಹುದು. ಇದು ಪಾರದರ್ಶಕ ಚುನಾವಣಾ ಪ್ರಕ್ರಿಯೆಯನ್ನು ಖಚಿತಪಡಿಸಿಕೊಳ್ಳಲು ಒಂದು ಕಾರ್ಯವಿಧಾನವಾಗಿದೆ. ಸಿ-ವಿಜಿಲ್ ಅಪ್ಲಿಕೇಶನ್ ಅನ್ನು ಯಾವುದೇ ಸ್ಮಾರ್ಟ್ ಪೋನ್‍ನಲ್ಲಿ ಉತ್ತಮ ಇಂಟರ್ನೆಟ್ ಸಂಪರ್ಕ ಮತ್ತು ಜಿಪಿಎಸ್ ಸೌಲಭ್ಯದೊಂದಿಗೆ ಸ್ಥಾಪಿಸಬಹುದು. ದೂರು ಸ್ವೀಕರಿಸಿದ 100 ನಿಮಿಷದಲ್ಲಿ ಕ್ರಮ ಕೈಗೊಂಡು ಉತ್ತರ ಪಡೆಯುವ ವ್ಯವಸ್ಥೆಯಾಗಿದೆ. ದೂರುದಾರರು ಯಾವುದೇ ನೀತಿ ಸಂಹಿತೆಯ ಉಲ್ಲಂಘನೆ ಅಥವಾ ವೆಚ್ಚ ಸಂಬಂಧಿತ ನಿಯಮಗಳ ಉಲ್ಲಂಘನೆಯನ್ನು ಗಮನಿಸಿದರೆ ಅಪ್ಲಿಕೇಶನ್ ಮೂಲಕ ಚಿತ್ರ ಅಥವಾ ವೀಡಿಯೊ ತೆಗೆದುಕೊಳ್ಳುವ ಮೂಲಕ ದೂರನ್ನು ದಾಖಲಿಸಬಹುದು. ಜಿಲ್ಲಾ ನಿಯಂತ್ರಣ ಕೊಠಡಿಯಿಂದ ಕ್ಷೇತ್ರ ಘಟಕಕ್ಕೆ ದೂರು ರವಾನಿಸಲಾಗುವುದು. ಬಳಿಕ ಸ್ಕ್ವಾಡ್‍ಗಳು ಸ್ಥಳಕ್ಕೆ ಆಗಮಿಸಿ ಕ್ರಮ ಕೈಗೊಳ್ಳಲಿವೆ. ಅಪ್ಲಿಕೇಶನ್ ಫೆÇೀಟೋ/ವೀಡಿಯೊವನ್ನು ತೆಗೆದ ಸ್ಥಳವನ್ನು ಗುರುತಿಸುತ್ತದೆ ಮತ್ತು ರೆಕಾರ್ಡ್ ಮಾಡುತ್ತದೆ, ಆದ್ದರಿಂದ ಸ್ಕ್ವಾಡ್ ಈ ಡಿಜಿಟಲ್ ಪುರಾವೆಯನ್ನು ಸಕಾಲಿಕ ಕ್ರಮ ತೆಗೆದುಕೊಳ್ಳಲು ಬಳಸಬಹುದು. ಫೆÇೀನ್ ಸಂಖ್ಯೆ, ಒಟಿಪಿ ಮತ್ತು ವೈಯಕ್ತಿಕ ವಿವರಗಳನ್ನು ಒದಗಿಸುವ ಮೂಲಕ ದೂರು ಸಲ್ಲಿಸಿದ ವ್ಯಕ್ತಿಯು ಮುಂದಿನ ಕ್ರಮವನ್ನು ತಿಳಿಯಲು ಐಡಿಯನ್ನು ಪಡೆಯುತ್ತಾನೆ. ಆ್ಯಪ್‍ನಲ್ಲಿ ದೂರುದಾರರು ಅನಾಮಧೇಯವಾಗಿ ದೂರು ಸಲ್ಲಿಸುವ ಸೌಲಭ್ಯವೂ ಇದೆ. ಈ ರೀತಿಯಾಗಿ, ದೂರುದಾರರು ದೂರಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯುವುದಿಲ್ಲ. ಒಂದೇ ಸ್ಥಳದಿಂದ ನಿರಂತರವಾಗಿ ಒಂದೇ ರೀತಿಯ ದೂರುಗಳನ್ನು ದಾಖಲಿಸುವುದನ್ನು ತಪ್ಪಿಸುವ ಕಾರ್ಯವಿಧಾನವೂ ಇದೆ. ಜಿಲ್ಲಾ ಮಟ್ಟದಲ್ಲಿ ಪರಿಹರಿಸಲು ಸಾಧ್ಯವಾಗದಿದ್ದರೆ ಮುಂದಿನ ಕ್ರಮಕ್ಕಾಗಿ ಕೇಂದ್ರ ಚುನಾವಣಾ ಆಯೋಗದ ರಾಷ್ಟ್ರೀಯ ಕುಂದುಕೊರತೆ ಪೋರ್ಟಲ್‍ಗೆ ಮಾಹಿತಿ ಕಳುಹಿಸಲಾಗುವುದು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries