ತಿರುವನಂತಪುರಂ: ಕೆಎಸ್ಆರ್ಟಿಸಿಯಲ್ಲಿ ಬಜೆಟ್ ಟೂರಿಸಂ ಭಾಗವಾಗಿ ಬಂದ ಆದಾಯದಲ್ಲಿ 38 ಲಕ್ಷ ರೂಪಾಯಿ ನಾಪತ್ತೆಯಾಗಿದೆ ಎಂದು ಆರೋಪಿಸಲಾಗಿದೆ.
ಘಟನೆಗೆ ಕಾರಣರಾದ ಇಬ್ಬರು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ವಿವಿಧ ಡಿಪೆÇೀಗಳಿಂದ ಸೇವೆಯ ಆದಾಯವು ಕಾಣೆಯಾಗಿದೆ.
ಖಾತೆಯಲ್ಲಿ ಹಣ ಇಲ್ಲದಿರುವುದು ಕಂಡುಬಂದಾಗ ಮುಖ್ಯ ಸಂಚಾರ ವ್ಯವಸ್ಥಾಪಕರು ಮತ್ತು ಬಜೆಟ್ ಪ್ರವಾಸೋದ್ಯಮದ ರಾಜ್ಯ ಸಂಯೋಜಕರನ್ನು ಅವರ ಸ್ಥಾನದಿಂದ ತೆಗೆದುಹಾಕಲಾಯಿತು ಮತ್ತು ಕ್ರಮವನ್ನು ತಡೆಯಲು ಪ್ರಯತ್ನಿಸಲಾಯಿತು. ಘಟನೆಯ ತನಿಖೆಯನ್ನು ಘೋಷಿಸಲಾಗಿಲ್ಲ. ಟೂರಿಸಂ ಮೂಲಕ 2.5 ಕೋಟಿ ಬಜೆಟ್ ಬಂದಿದೆ ಎಂಬುದು ಕೆಎಸ್ ಆರ್ ಟಿಸಿಯ ವಿವರಣೆ. ಈ ಪೈಕಿ 35 ಲಕ್ಷ ರೂ.ನಾಪತ್ತೆಯಾಗಿದೆ.
ಈ ನಡುವೆ ಕೆಎಸ್ಆರ್ಟಿಸಿಯಲ್ಲಿ ಇನ್ನೂ ವೇತನ ವಿತರಣೆ ಆರಂಭವಾಗಿಲ್ಲ. 10ರೊಳಗೆ ಮೊದಲ ಕಂತು ಪಾವತಿಸುವುದಾಗಿ ಸರ್ಕಾರ ಭರವಸೆ ನೀಡಿತ್ತು. ಈ ಬಗ್ಗೆ ಹೈಕೋರ್ಟ್ಗೂ ಮಾಹಿತಿ ನೀಡಲಾಗಿತ್ತು.





