HEALTH TIPS

ತೆಂಗಿನ ನೆಲಹೊದಿಕೆಯಿಂದ ಮೇವಿನವರೆಗೆ, ಕೇಂದ್ರದ ನೆರವಿನೊಂದಿಗೆ ವೈವಿಧ್ಯೀಕರಣಕ್ಕಾಗಿ ಯೋಜನೆ ರೂಪಿಸಿದ ಕಯರ್ ಫೆಡ್

                ಕೊಟ್ಟಾಯಂ: ತೆಂಗು ಅಭಿವೃದ್ಧಿ ಮಂಡಳಿ ಮತ್ತು ಕೇಂದ್ರ ಸರ್ಕಾರದ ಕೃಷಿ ಮೂಲಸೌಕರ್ಯ ನಿಧಿ ಯೋಜನೆಯ ನೆರವಿನೊಂದಿಗೆ ಕೈರ್‍ಫೆಡ್‍ನಲ್ಲಿ ವೈವಿಧ್ಯೀಕರಣ ಯೋಜನೆ ಪುರೋಗತಿಯಲ್ಲಿದೆ.

              ಅಂದಾಜು 2.5 ಕೋಟಿ ರೂ.ವೆಚ್ಚದ ಯೋಜನೆಯಲ್ಲಿ ಕೊಬ್ಬರಿ, ಹಿಂಡಿ, ಗೆರಟೆ, ತೆಂಗಿನ ನೀರು ಮೊದಲಾದ ಉತ್ಪನ್ನಗಳನ್ನು ತಯಾರಿಸಿ ಮಾರುಕಟ್ಟೆಗೆ ತರಲಾಗುವುದು.

                ಮಲಬಾರ್ ಪ್ರದೇಶದಿಂದ ಪ್ರತಿದಿನ 10,000 ತೆಂಗಿನಕಾಯಿಗಳನ್ನು ಖರೀದಿಸಲಾಗುವುದು. ಅವುಗಳ ಹೊಟ್ಟುಗಳನ್ನು ಪುಡಿ ಮಾಡಲು ಕೈರ್‍ಫೆಡ್‍ನ ಸ್ವಂತ ಗಿರಣಿಗಳಿಗೆ ಕಳುಹಿಸಲಾಗುತ್ತದೆ. ಈ ಮೂಲಕ ತೆಂಗಿನ ಉಪ ಉತ್ಪನ್ನಗಳು ತಯಾರಾಗಲಿದೆ. ಗರಟೆಯಿಂದ  ಇದ್ದಿಲು ಉತ್ಪಾದಿಸಲು ತನ್ನದೇ ಆದ ಘಟಕವನ್ನು ಪ್ರಾರಂಭಿಸುತ್ತದೆ. ತಂಪು ಪಾನೀಯ ಮತ್ತು ವಿನೆಗರ್ ತಯಾರಿಸುವ ಕಂಪನಿಗಳಿಗೆ ತೆಂಗಿನ ನೀರು ನೀಡಲಾಗುವುದು. ಜೊತೆಗೆ ತೆಂಗಿನ ಸೊಪ್ಪಿನ ಚಾಪೆ ಮತ್ತು ಭೂಸವಕಳಿ ತಡೆ ಬೃಹತ್ ಚಾಪೆ ನಿರ್ಮಿಸಲೂ ಉದ್ದೇಶಿಸಲಾಗಿದೆ.

            ಪಾಲಕ್ಕಾಡ್ ಜಿಲ್ಲೆಯ ಕಣ್ಣಾಡಿ ಎಂಬಲ್ಲಿ  90 ಸೆಂಟ್ಸ್ ಭೂಮಿಯನ್ನು ಗುತ್ತಿಗೆ ನೀಡಿ ತೆಂಗಿನ ಎಣ್ಣೆ ತಯಾರಿಕಾ ಕಾರ್ಖಾನೆಯನ್ನು ಸ್ಥಾಪಿಸಲಾಗುವುದು. ತೆಂಗಿನ ಎಣ್ಣೆಯನ್ನು ಬ್ರಾಂಡ್ ಮಾಡಿ ಕೇರ್‍ಫೆಡ್ ಶೋರೂಂಗಳ ಮೂಲಕ ಮಾರಾಟ ಮಾಡಲಾಗುವುದು. ತೆಂಗಿನ ಎಣ್ಣೆಯ ಬಳಿಕ ಉಳಿದ ಹಿಂಡಿಯಿಂದ ಜಾನುವಾರು ಮೇವು ತಯಾರಿಸಲು ಸಹ ಬಳಸಲಾಗುತ್ತದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries