ಉಪ್ಪಳ: ಮಾ. 24 ರಿಂದ 31 ರವರೆಗೆ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ನಡೆಯಲಿರುವ 18 ನೇ ವರ್ಷದ ಅಖಂಡ ಭಜನಾಸಪ್ತಾಹಕ್ಕೆ ಭಾನುವಾರ ಸೂರ್ಯಾಸ್ತ 6.39 ಕ್ಕೆ ಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರು ದೀಪ ಪ್ರಜ್ವಲನೆಗೈಯುವುದರ ಮೂಲಕ ಚಾಲನೆ ನೀಡಿದರು.
ಭಜನಾ ಮಹೋತ್ಸವದಲ್ಲಿ 180 ಕ್ಕೂ ಅಧಿಕ ಭಜನಾ ತಂಡಗಳು ಭಜನಾಸೇವೆ ಸಲ್ಲಿಸಲಿದ್ದಾರೆ. ಭಾನುವಾರ ಪ್ರತಿಷ್ಠೆಗೊಂಡ ನಕ್ಷತ್ರವನದ ನವಗ್ರಹ ಪರಿಸರದಲ್ಲಿ ಮಾತೆಯರು ಸಹಸ್ರಾರು ದೀಪ ಬೆಳಗುವುದರ ಮೂಲಕ ಸುಂದರವಾದ ದೀಪೋತ್ಸವ ವಿಜೃಂಭಣೆಯಿಂದ ಜರಗಿತು.