ಕಾಸರಗೋಡು: ಶ್ರೀ ಬೇಡಗಂ ವಲಿಯವೀಡ್ ಕಮಲೋನ್ ತರವಾಡು ಮನೆಯ ಪುನ:ನಿರ್ಮಾಣ ಕಾರ್ಯ ಪೂರ್ತಿಗೊಂಡಿದ್ದು, ಮಾ. 17ರಿಂದ 22ರ ವರೆಗೆ ಪುನ:ಪ್ರತಿಷ್ಠಾ ನವೀಕರಣ ಕಲಶಾಭಿಷೇಕ ಹಾಗೂ 27ರಿಂದ 29ರ ವರೆಗೆ ಪೆರುಂಕಳಿಯಾಟ ಮಹೋತ್ಸವ ನಡೆಯಲಿರುವುದಾಗಿ ತರವಾಡು ಸಮಿತಿ ಪದಾಧಿಕಾರಿ ವಿ.ಕೆ.ಕೃಷ್ಣನ್ ನಾಯರ್ ಸುದ್ದಿಗೋಷ್ಠೀಯಲ್ಲಿ ತಿಳಿಸಿದ್ದಾರೆ.
ಬ್ರಹ್ಮಶ್ರೀ ಇರಿವೈಲ್ ಐ.ಕೆ ಕೇಶವನ್ ವಾಳುನ್ನವರ್ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಜರುಗಲಿದೆ.
17ರಂದು ಸಂಜೆ 6ಕ್ಕೆ ಶ್ರೀ ಕಲ್ಯೋಟ್ ವತಿಯಮ್ಮನವರ ತಿರುಮುಡಿ ಏರಲಿರುವುದು. ನಂತರ ವಚನ ಪಾರಾಯಣ, ಪ್ರಸಾದ ವಿತರಣೆಯ ನಂತರ ತಿರುಮುಡಿ ಇಳಿಸುವುದರೊಂದಿಗೆ ಉತ್ಸವ ಸಂಪನ್ನಗೊಳ್ಳಲಿದೆ.
ಕಲ್ಯೋಟ್ ಭಗವತಿ. ರಕ್ತಜಾತಾಂಡೈವ ಅಥವಾ ವೈರಜಾತ, ಪಡಿಞËರ್ ಚಾಮುಮಡಿ, ಕುಲದೇವರಾದ ಭಾಗ್ಯಚಾಮುಂಡಿ, ಕುಂಡಂಕುಯಿಯಪ್ಪನವರ ಸಾಂಬಪ್ರತಿಷ್ಠೆ. ರಕ್ತಚಾಮುಂಡಿ. ಮೂವಾಲಂಕುಯಿ ಚಾಮುಂಡಿ, ಪಾಡಾರ್ಕುಳಂಗರ ಭಗವತಿ, ಗುಳಿಗ ಮುಂತಾದ ದೈವಗಳ ಆರಾಧನೆ ನಡೆಯಲಿರುವುದು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿ.ಕೆ.ಚಾತುಕುಟ್ಟಿ ನಾಯರ್, ವಿ.ಕೆ.ವಾಮನನ್ ನಾಯರ್, ವಿ.ಕೆ.ದಾಮೋದರನ್ ನಾಯರ್, ವಿ.ಕೆ.ಜನಾರ್ದನನ್ ನಾಯರ್, ಪಿ.ವಿ ವಿಜಯನ್ ನಾಯರ್, ವಿ.ಕೆ.ಕರುಣಾಕರನ್ ನಾಯರ್ ಉಪಸ್ಥಿತರಿದ್ದರು.

