ಮುಳ್ಳೇರಿಯ: ಬೋವಿಕ್ಕಾನ ಬೆಳ್ಳಪ್ಪಾಡಿಯ ಮಧುವಾಹಿನಿ ಗ್ರಂಥಾಲಯದ ನೇತೃತ್ವದಲ್ಲಿ `ಮತದಾನ ಹಕ್ಕು, ಪ್ರಜಾತಂತ್ರ' ಎಂಬ ವಿಷಯದ ಕುರಿತು ವಿಚಾರಗೋಷ್ಠಿ ನಡೆಯಿತು.
ಸಾಂಸ್ಕøತಿಕ ಕಾರ್ಯಕರ್ತ, ನಿವೃತ್ತ ಅಧ್ಯಾಪಕ ಗೋವಿಂದ ಬಳ್ಳಮೂಲೆ ಉದ್ಘಾಟಿಸಿದರು. ಸಿ.ಕೆ.ಬಾಲಕೃಷ್ಣನ್, ರಾಘವನ್ ಬೆಳ್ಳಿಪ್ಪಾಡಿ, ಗೋಪಾಲನ್ ಪಾಣೂರು ಮಾತನಾಡಿದರು. ಕೆ.ಜಯಚಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಪಿ.ಜ್ಯೋತಿ ಸೂರ್ಯನ್ ಸ್ವಾಗತಿಸಿ, ಕೆ.ಶೋಭಾ ವಂದಿಸಿದರು. ಬಿ.ಲಲಿತಾ, ಪಿ.ನಾರಾಯಣನ್ ನಾಯರ್ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು.