ಉಪ್ಪಳ: ಶೃಂಗೇರಿ ಸಂಸ್ಥಾನದ ಶ್ರೀ ಶ್ರೀ ವಿಭುಶೇಖರ ಭಾರತೀ ಸ್ವಾಮೀಜಿಯವರು ಎ.27 ರಂದು ಆವಳ ಮಠಕ್ಕೆ ಚಿತ್ತೈಸಲಿದ್ದಾರೆ. ಅಂದು ಸಂಜೆ 6 ಕ್ಕೆ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು. ಆ ಬಳಿಕ ಮಂಗಳಾರತಿ, ರಾತ್ರಿ 7.30 ಕ್ಕೆ ಧೂಳಿ ಪಾದ ಪೂಜೆ, ಚಂದ್ರ ಮೌಳೀಶ್ವರ ಪೂಜೆ, ಆ ಬಳಿಕ ಭಕ್ತಾದಿಗಳಿಂದ ಪಾದ ಪೂಜೆ, ಎ.28 ರಂದು ಬೆಳಗ್ಗೆ 8.30 ಕ್ಕೆ ಮೂಲಸ್ಥಾನಕ್ಕೆ ಭೇಟಿ, 9.30 ಕ್ಕೆ ಆಟಿಕುಕ್ಕೆ ದೇವಸ್ಥಾನಕ್ಕೆ ಭೇಟಿ ನೀಡಿ ಬ್ರಹ್ಮಕಲಶ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಶತ ಚಂಡಿಕಾ ಪೂರ್ಣಾಹುತಿ, ಮಧ್ಯಾಹ್ನ 12 ಕ್ಕೆ ಸಭಾ ಕಾರ್ಯಕ್ರಮ, ಆಶೀರ್ವಚನ ಮತ್ತು ಮಂತ್ರಾಕ್ಷತೆ ನೀಡುವರು. ಸಂಜೆ 3.30 ಕ್ಕೆ ಸಜಂಕಿಲ ಭಜನಾ ಮಂಡಳಿಗೆ ಭೇಟಿ ನೀಡುವರು.