HEALTH TIPS

ಭಾರತೀಯ ನೌಕಾಪಡೆ ನೆರವು: ಅಪಹೃತ ಬಾಂಗ್ಲಾದೇಶ ಹಡಗಿನ ರಕ್ಷಣೆ

            ವದೆಹಲಿ: ಕಡಲ್ಗಳ್ಳರಿಂದ ಅಪಹರಣಕ್ಕೆ ಒಳಗಾಗಿದ್ದ ಬಾಂಗ್ಲದೇಶದ ಸರಕು ಸಾಗನೆ ಹಡಗಿನ ರಕ್ಷಣೆಗೆ ನಡೆದ ಕಾರ್ಯಾಚರಣೆಗೆ ಭಾರತೀಯ ನೌಕಾಪಡೆಯ ಯುದ್ಧನೌಕೆ ಹಾಗೂ ಗಸ್ತು ವಿಮಾನ ನೆರವು ನೀಡಿ, ಗಮನ ಸೆಳೆದಿವೆ.

                ಹಿಂದೂಮಹಾಸಾಗರದಲ್ಲಿ ಈ ಹಡಗನ್ನು ಅಪಹರಣ ಮಾಡಲಾಗಿತ್ತು.

               ಈ ಕಡಲ ಪ್ರದೇಶದಲ್ಲಿ ಅಪಹೃತ ಹಡಗುಗಳ ರಕ್ಷಣೆಗೆ ಭಾರತೀಯ ನೌಕಾಪಡೆಯು ನೆರವಿನ ಹಸ್ತಚಾಚುತ್ತಿದ್ದು, ಈ ಕಾರ್ಯಾಚರಣೆ ತಾಜಾ ನಿದರ್ಶನವಾಗಿದೆ.

                ಈ ಹಡಗು ರಕ್ಷಣೆಗೆ ನಡೆಸಿದ ಕಾರ್ಯಾಚರಣೆ ಕುರಿತು ಶುಕ್ರವಾರ ಮಾಹಿತಿ ನೀಡಿರುವ ನೌಕಾಪಡೆ, ಹಡಗಿನಲ್ಲಿರುವ ಎಲ್ಲ ಸಿಬ್ಬಂದಿ (ಬಾಂಗ್ಲದೇಶ ಪ್ರಜೆಗಳು) ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದೆ.

               ಬಾಂಗ್ಲಾದೇಶಕ್ಕೆ ಸೇರಿದ ಹಡಗು ಮಾರ್ಚ್‌ 12ರಂದು ಅಪಹರಣಗೊಂಡಿತ್ತು. ಈ ಕುರಿತು ಮಾಹಿತಿ ಲಭಿಸುತ್ತಿದ್ದಂತೆಯೇ, ದೀರ್ಘ ವ್ಯಾಪ್ತಿ ಕಡಲ ಗಡಿ ಗಸ್ತು (ಎಲ್‌ಆರ್‌ಎಂಪಿ) ಯುದ್ಧನೌಕೆ 'ಪಿ-8ಐ' ಅನ್ನು ನಿಯೋಜಿಸಲಾಯಿತು. ಹಡಗು ಸೋಮಾಲಿಯಾ ಕಡಲ ಗಡಿ ತಲುಪುವವರೆಗೂ, ಅದರ ಸಮೀಪದಲ್ಲಿಯೇ ಸಾಗಿದ ಯುದ್ಧನೌಕೆ ಹಡಗಿನ ಸುರಕ್ಷತೆಯನ್ನು ಖಾತರಿಪಡಿಸಿತ್ತು ಎಂದು ತಿಳಿಸಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries