HEALTH TIPS

ಅಡೂರು ಬಾಲಕೃಷ್ಣ ತಂತ್ರಿ ವಿದ್ಯಾರ್ಥಿವೇತನ ವಿತರಣೆ

              ಮುಳ್ಳೇರಿಯ : ಅಡೂರು ಗ್ರಾಮದ ಕೊರತಿಮೂಲೆ ಕೃಷ್ಣನಿವಾಸದ ಬಾಲಕೃಷ್ಣ ತಂತ್ರಿಗಳ ಸ್ಮರಣಾರ್ಥ ನೀಡುವ 2023-24ನೇ ಸಾಲಿನ ವಿದ್ಯಾರ್ಥಿವೇತನವನ್ನು ಅಡೂರು ವಿದ್ಯಾಭಾರತೀ ವಿದ್ಯಾಲಯದ 5ನೇ ತರಗತಿಯ ವಿದ್ಯಾರ್ಥಿನಿ ಲಾವಣ್ಯ ಡಿ ಅವರಿಗೆ ಶುಕ್ರವಾರ ವಿತರಿಸಲಾಯಿತು. 

           ಅಡೂರಿನ ವಿದ್ಯಾಭಾರತೀ ವಿದ್ಯಾಲಯದ ವಾರ್ಷಿಕೋತ್ಸವ ಸಮಾರಂಭದಲ್ಲಿ ಲಾವಣ್ಯ ಅವರನ್ನು ಶಾಲು ಹೊದೆಸಿ, ಸ್ಮರಣಿಕೆ, ಪುಸ್ತಕ ಉಡುಗೊರೆ ಹಾಗೂ ವಿದ್ಯಾರ್ಥಿವೇತನ ನೀಡಿ ಗೌರವಿಸಲಾಯಿತು. ಈಕೆ ಪಠ್ಯದ ಜತೆಯಲ್ಲಿ ಗಾಯನ, ನೃತ್ಯ ಹಾಗೂ ಚಿತ್ರಕಲೆಯಲ್ಲೂ ಕೂಡಾ ಚತುರೆಯಾಗಿದ್ದಾಳೆ. ಈಕೆ ಶಾರದಾದೇವಿ ಬೈತನಡ್ಕ ಅವರಿಂದ ಶಾಸ್ತ್ರೀಯ ಸಂಗೀತ ಹಾಗೂ ಸುಶ್ಮಿತಾ ಆಚಾರ್ಯ ಅವರಿಂದ ಭರತನಾಟ್ಯ ತರಬೇತಿ ಪಡೆಯುತ್ತಿದ್ದಾಳೆ. ಈಕೆ ಅಡೂರಿನ ದೇರಳದ ಹರೀಶ ಡಿ ಹಾಗೂ ಇಂದಿರಾ ಜಿ ಎ ಅವರ ಪುತ್ರಿ. ಈಕೆ 2023ರಲ್ಲಿ ನಡೆದ ವಿದ್ಯಾನಿಕೇತನ ಜಿಲ್ಲಾ ಕಲೋತ್ಸವದಲ್ಲಿ 30ರಲ್ಲಿ 28 ಅಂಕಗಳನ್ನು ಪಡೆದು ಕಲಾಪ್ರತಿಭೆ ಗೌರವ ಪಡೆದಿದ್ದಳು. ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಶಿಕ್ಷಕರಾದ ರವೀಂದ್ರ ಮಾಸ್ತರ್, ಸಾಹಿತಿ ಪ್ರಶಾಂತ ರಾಜ ವಿ ತಂತ್ರಿ, ಶಾಲಾ ಮುಖ್ಯಸ್ಥೆ ಪ್ರೇಮಾ ಎಂ ಭಾರಿತ್ತಾಯ, ಶಾಲಾ ಆಡಳಿತ ಸಮಿತಿ ಮುಖಂಡರಾದ ಡಿ. ವೆಂಕಟ್ರಾಜ್ ಅಡೂರು, ಗಣೇಶ, ವನಜ, ಶಿಕ್ಷಕಿಯರಾದ ಪ್ರೇಮಾವತಿ ಟೀಚರ್, ಭಾರತೀ ಟೀಚರ್, ಸ್ಮಿತಾ ಟೀಚರ್ ಮೊದಲಾದವರು ಇದ್ದರು. ಸ್ವಾತಿ ಟೀಚರ್ ವಂದಿಸಿದರು. ಬೈತನಡ್ಕ ಬಾಲಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಿರೂಪಿಸಿದರು. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries