ಕಾಸರಗೋಡು: ಅಶೋಕನಗರ ಶ್ರೀ ಅಯ್ಯಪ್ಪ ಭಜನಾ ಮಂದಿರ ಮತ್ತು ಶ್ರೀ ವಿಷ್ಣುಮೂರ್ತಿ ರಕ್ತೇಶ್ವರಿ ದೈವಸ್ಥಾನದ ಪುನ:ಪ್ರತಿಷ್ಠಾ ಸಮಾರಂಭದ ಆಮಂತ್ರಣಪತ್ರಿಕೆ ಬಿಡುಗಡೆ ದೈವಸ್ಥಾನ ವಠಾರದಲ್ಲಿ ಜರುಗಿತು. ದೈವಸ್ಥಾನದಲ್ಲಿ ಪುನ:ಪ್ರತಿಷ್ಠಾ ಮಹೋತ್ಸವ ಮೇ 8ರಿಂದ 11ರ ವರೆಗೆ ಜರುಗಲಿದೆ.
ನವೀಕರಣ ಪುನ:ಪ್ರತಿಷ್ಠಾ ಸಮಿತಿ ಗೌರವಾಧ್ಯಕ್ಷ ನವೀನ್ ಕುಮಾರ್ ಭಟ್ ಕುಂಜರಕಾನ ಅವರು ಸಮಿತಿ ಅಧ್ಯಕ್ಷ ವರದರಾಜ್ ಅವರಿಗೆ ನೀಡುವ ಮೂಲಕ ಬಿಡುಗಡೆಗೊಳಿಸಿದರು. ಸಮಾರಂಬದಲ್ಲಿ ಅಧ್ಯಕ್ಷರಾದ ಮೋಹನ್ ರಾವ್ ಕೆ. ವಿ, ನವೀನ್ ಕುಮಾರ್, ಕಾರ್ಯದರ್ಶಿಗಳಾದ ನಾಗೇಶ್, ಶಿವಪ್ರಸಾದ್, ಪುರುಷೋತ್ತಮನ್, ಕೋಶಾಧಿಕಾರಿಗಳಾದ ರಮೇಶ ಮಣಿ, ಸುನೀಲ್ ಕುಮಾರ್, ದೇವಸ್ಥಾನದ ಅಧ್ಯಕ್ಷರಾದ ಪುರುಷೋತ್ತಮನ್, ಗುರು ಸ್ವಾಮಿ ಸದಾನಂದನ್, ಮೋಹನನ್, ದೇವಸ್ಥಾನದ ಅರ್ಚಕ ಶ್ರೀಪತಿ ಭಟ್, ಗುಳಿಗಜ್ಜನ ಸೇವೆ ನಿರ್ವಹಿಸುತ್ತಿರುವ ಕೃಷ್ಣನ್, ಮಹಿಳಾ ಸಮಿತಿ ಪದಾಧಿಕಾರಿಗಳಾದ ಜಯಶ್ರೀ ದಿವಾಕರ್, ರಮಣಿ ರಮೇಶ್, ಪ್ರಮೀಳಾ ಜೈ ಕುಮಾರ್, ಶ್ಯಾಮಲಾ ಸದಾನಂದನ್, ಗೀತಾ ಹಾಗೂ ವಿವಿಧ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

