ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮ ಮಠದಲ್ಲಿ ಮಾ.24 ಭಾನುವಾರ ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಗಳವರ ನೇತೃತ್ವದಲ್ಲಿ, ಶ್ರೀ ಕ್ಷೇತ್ರ ಕಟೀಲಿನ ಅನುವಂಶಿಕ ಪ್ರಧಾನ ಅರ್ಚಕÀ ಬ್ರಹ್ಮ ಶ್ರೀ ಅನಂತಪದ್ಮನಾಭ ಆಸ್ರಣ್ಣರ ನಿರ್ದೇಶನದೊಂದಿಗೆ ಮತ್ತು ಬ್ರಹ್ಮ ಶ್ರೀ ಕಮಲಾದೇವೀ ಪ್ರಸಾದ ಆಸ್ರಣ್ಣರವರ ಆಚಾರ್ಯತ್ವದಲ್ಲಿ ನವಗ್ರಹ ಪ್ರತಿಷ್ಠೆ ಮತ್ತು ಲೋಕ ಕಲ್ಯಾಣಾರ್ಥವಾಗಿ ‘‘ಅμÉ್ಟೂೀತ್ತರ ಸಹಸ್ರ ನವಗ್ರಹ ಯಾಗ’’ ಜರಗಲಿರುವುದು. ಮಾ 23 ರಂದು ಶನಿವಾರ, ಸಂಜೆ 4.ಕ್ಕೆ ಋತ್ವಿಜರ ಆಗಮನ ,4.30 ಕ್ಕೆ ಉಪ್ಪಳ ಪೇಟೇಯಿಂದ ಹೊರೆಕಾಣಿಕೆ ಮೆರವಣಿಗೆಯ ಭವ್ಯ ಶೋಭಾಯಾತ್ರೆ ನಡೆಯಲಿದೆ. ಅದೇ ದಿನ ಸಂಜೆ 6. ಕ್ಕೆ ಪ್ರಾಸಾದ ಶುದ್ಧಿ, ವಾಸ್ತುಪೂಜೆ, ವಾಸ್ತುಹೋಮ, ರಾಕ್ಷೋಘ್ನಹೋಮ, ಬಿಂಬ ಶಯ್ಯಾಧಿವಾಸ ನಡೆಯಲಿದೆ.
ಮಾ. 24 ರಂದು ಭಾನುವಾರ ಪ್ರಾತಃ 6. ಕ್ಕೆ ಪ್ರಾರ್ಥನೆ, ಪುಣ್ಯಾಹವಾಚನ, ಆಚಾರ್ಯವರಣ, 7.30 ಕ್ಕೆ ಅμÉ್ಟೂೀತ್ತರ ಸಹಸ್ರ ನವಗ್ರಹ ಯಾಗ ಆರಂಭ, 9.58 ರ ವೃಷಭ ಲಗ್ನ ಸುಮುಹೂರ್ತದಲ್ಲಿ ನವಗ್ರಹ ಪ್ರತಿμÉ್ಠ ನಡೆಯಲಿದೆ. 10.30 ಕ್ಕೆ ಯತಿಶ್ರೇಷ್ಠರಾದ ಪರಮ ಪೂಜ್ಯ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದಂಗಳವರು, ಅದಮಾರುಮಠ,ಉಡುಪಿ, ಪರಮ ಪೂಜ್ಯ ಶ್ರೀಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು, ಎಡನೀರು ಮಠ, ಪರಮ ಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ, ಮಾಣಿಲ, ಪರಮ ಪೂಜ್ಯ ಶ್ರೀ ಮುಕ್ತಾನಂದ ಸ್ವಾಮೀಜಿ, ಶ್ರೀ ಕ್ಷೇತ್ರ ಕರಿಂಜೆ ಅವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು. ಮಧ್ಯಾಹ್ನ 11. ಕ್ಕೆ ಪರಮಪೂಜ್ಯ ಸ್ವಾಮೀಜಿಯವರಿಂದ ಅನುಗ್ರಹ ಸಂದೇಶ, 11.30 ಕ್ಕೆ ಪರಮ ಪೂಜ್ಯ ಯತಿವರ್ಯರುಗಳ ಸಾನ್ನಿದ್ಯದಲ್ಲಿ ಯಾಗದ ಪೂರ್ಣಾಹುತಿ ನಡೆಯಲಿರುವುದು. ಮಧ್ಯಾಹ್ನ 1. ಕ್ಕೆ ಪ್ರಸನ್ನ ಮಹಾಪೂಜೆ, ಅನ್ನ ಸಂತರ್ಪಣೆ ನಡೆಯಲಿರುವುದು. ಈ ಸಂದರ್ಭದಲ್ಲಿ ಕೇಂದ್ರ ಪ್ರವಾಸೋದ್ಯಮ ಖಾತೆ ರಾಜ್ಯ ಸ್ವತಂತ್ರ ಸಚಿವ ಶ್ರೀಪಾದ ಯಸ್ಸೋ ನಾಯಕ್, ರಾಜ್ಯಸಭಾ ಸದಸ್ಯ ಕೆ. ನಾರಾಯಣ,ಸದಾಶಿವ ಶೆಟ್ಟಿ ಕುಳೂರು, ರಮೇಶ್ ರಾಜು, ಡಾ. ಕೆ. ಸಿ. ರಾಮಮೂರ್ತಿ, ಐ.ಪಿ.ಎಸ್, ಡಾ. ಮೋಹನ್ ಆಳ್ವ, ಕೆ ಕೆ ಶೆಟ್ಟಿ, ಡಾ. ಜಿ ರಮೇಶ್, ಪ್ರದೀಪ್ ಕುಮಾರ್ ಕಲ್ಕೂರ, ಎ.ಜೆ ಶೇಖರ್ ತೊಕ್ಕೊಟ್ಟು ಮೊದಲಾದವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ಅಪರಾಹ್ಣ 2.30 ಕ್ಕೆ ಆಳ್ವಾಸ್ ಶಿಕ್ಷಣ ಪ್ರತಿμÁ್ಠನದ ವಿದ್ಯಾರ್ಥಿಗಳಿಂದ ‘ಆಳ್ವಾಸ್ ಸಾಂಸ್ಕøತಿಕ ವೈಭವ’ ಜರಗಲಿರುವುದು. ಸಂಜೆ ಸೂರ್ಯಾಸ್ತ 6.39 ಕ್ಕೆ ಪರಮ ಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಯವರಿಂದ ಅಖಂಡ ಭಜನಾ ಸಪ್ತಾಹದ ದೀಪ ಪ್ರಜ್ವಲನೆ ನಿರ್ವಹಿಸುವರು. ಬಳಿಕ ನಕ್ಷತ್ರವನದಲ್ಲಿ ದೀಪೆÇೀತ್ಸವ ಜರಗಲಿರುವುದು. ಮಾ. 31 ರಂದು ಭಾನುವಾರ ಸಂಜೆ ಸೂರ್ಯಾಸ್ತ 6.40 ಕ್ಕೆ ‘ಭಜನಾ ಮಂಗಲಾಚರಣೆ’ ನಡೆಯಲಿರುವುದು.

