HEALTH TIPS

ಖಾಲಿ ಪ್ಲಾಸ್ಟಿಕ್ ಬಾಟಲಿಗಳ ಸಂಗ್ರಹಕ್ಕೆ ಮುಳ್ಳೇರಿಯದಲ್ಲಿ ತಂತಿ ಬಲೆ

                ಮುಳ್ಳೇರಿಯ: ಬಾಯಾರಿಕೆ ನೀಗಿಸಲು ಬಾಟಲಿ ನೀರು, ಬಾಟಲಿ ಜ್ಯೂಸ್‍ಗಳನ್ನು ಕುಡಿದು ಸಿಕ್ಕಸಿಕ್ಕಲ್ಲಿ ಎಸೆಯುವುದು ಸಾಮಾನ್ಯವಾಗಿದೆ. ಇದರಿಂದ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತದೆ. ಈ ಸಮಸ್ಯೆಯನ್ನು ನೀಗಿಸಲು ಕಾರಡ್ಕ ಗ್ರಾಮ ಪಂಚಾಯತಿ ಮುಳ್ಳೇರಿಯ ಪೇಟೆಯಲ್ಲಿ ಬಾಟಲಿ ತರಹ ದೊಡ್ಡ ಗಾತ್ರದಲ್ಲಿ ತಂತಿ ಬಲೆಯನ್ನು ನಿರ್ಮಿಸಿ ಅದರಲ್ಲಿ ಕುಡಿದ ಬಾಟಲಿಗಳನ್ನು ತುಂಬಿಸುವಂತೆ ಮಾಡಿದ್ದು, ಇತರ ಗ್ರಾಮ ಪಂಚಾಯತಿಗಳಿಗೂ ಮಾದರಿಯಾಗಿದೆ.  

              ಎಲ್ಲೆಂದರಲ್ಲಿ ಬೇಕಾಬಿಟ್ಟಿಯಾಗಿ ನೀರು, ರೆಡಿ ಜ್ಯೂಸ್‍ಗಳನ್ನು ಬಾಯಾರಿಕೆಗಳಾಗಿ ಕುಡಿದು ಎಲ್ಲೆಂದರಲ್ಲಿ ಬಿಸಾಡಿ ಮಾರ್ಗದ ಬದಿ ಪೇಟೆ ಪಟ್ಟಣಗಳನ್ನು ಮಾಲಿನ್ಯಗೊಳಿಸುವುದು ಸಾಮಾನ್ಯವಾಗಿದೆ. ಈ ಸಮಸ್ಯೆ ಪರಿಹರಿಸಲು ಅದಕ್ಕೊಂದು ಸೂಕ್ತ ವ್ಯವಸ್ಥೆ ನೀಡಿ ಮಾದರಿಯಾಗಿದೆ ಕಾರಡ್ಕ ಗ್ರಾಮ ಪಂಚಾಯತಿ. ಇದನ್ನು ಗುಜರಿಯವರಿಗೆ ಮಾರಾಟ ಮಾಡುವುದರಿಂದಲೂ ಸ್ವಲ್ಪ ಮಟ್ಟಿನ ಹಣ ಗಳಿಸಬಹುದು. ಹೀಗೆ ಹತ್ತಾರು ಕಡೆ ನಿರ್ಮಿಸಿ ಕೊಡುವುದರಿಂದ ಒಬ್ಬೊಬ್ಬರಿಗೆ ನೋಡಿಕೊಳ್ಳುವಂತೆ ಮಾಡುವುದರಿಂದಲೂ ಆದಾಯದ ಜೊತೆಗೆ ಪರಿಸರವೂ ಸುಂದರವಾಗುತ್ತದೆ. ಒಬ್ಬರಿಗೆ ಕೆಲಸವೂ ಆಗುವುದಲ್ಲದೆ ಇದಕ್ಕಾಗಿ ದೊಡ್ಡ ಬಜೆಟ್ ಏನು ಬೇಡ. ಕಸದಿಂದ ರಸ ಎಂಬಂತೆ ಮಾಡಿ ಈಗಾಗಲೇ ಕೆಲವು ಕಡೆ ಡಸ್ಟ್ ಬಿನ್‍ಗಳನ್ನು ಇಟ್ಟಿದ್ದರೂ ಇದರಲ್ಲಿ ಹಾಕುವವರಿಲ್ಲ. ಅವರನ್ನು ಈ ತಂತಿ ಬೇಲಿಯಲ್ಲಿ ಹಾಕುವಂತೆ ಮಾಡಿದ್ದಾರೆ. ಇದರಿಂದ ಪರಿಸರ ಸ್ವಚ್ಛತೆ ಕಾಪಾಡಬಹುದು.  



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries