HEALTH TIPS

ವಿಷುಕಣಿ ದರ್ಶನಕ್ಕೆ ಸಜ್ಜುಗೊಳ್ಳುತ್ತಿರುವ ಶಬರಿಮಲೆ ಸನ್ನಿಧಿ: ಅಯ್ಯಪ್ಪ ದರ್ಶನಕ್ಕೆ ಆಗಮಿಸಿದ ಅಪಾರ ಭಕ್ತ ಸಮೂಹ

                  ಪತ್ತನಂತಿಟ್ಟ: ಶಬರಿಮಲೆ ಸನ್ನಿಧಿ ವಿಷುಕಣಿ ದರ್ಶನಕ್ಕೆ ಸಿದ್ಧತೆ ನಡೆಸಿದೆ. ನಾಳೆ ಬೆಳಗ್ಗೆ 4ರಿಂದ 7ರವರೆಗೆ ದರ್ಶನ ಇರಲಿದೆ.

                  ಸಮೃದ್ಧಿಗಾಗಿ ವಿಷು ದಿನದಂದು ಅಯ್ಯಪ್ಪ ದರ್ಶನಕ್ಕಾಗಿ ಭಕ್ತರು ತಂಡೋಪತಂಡವಾಗಿ ಆಗಮಿಸುತ್ತಿದ್ದಾರೆ. ವಿಷುಕಣಿ ದರ್ಶನಕ್ಕಾಗಿ ಶಬರಿಮಲೆ ದೇಗುಲ ತೆರೆದಾಗಿನಿಂದ ಭಕ್ತರ ದಂಡು ಹರಿದು ಬರುತ್ತಿದೆ.

                  ಸನ್ನಿಧಾನದಲ್ಲಿ ವಿಷುಕಣಿ ದರ್ಶನಕ್ಕೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಇಂದು ರಾತ್ರಿ 9.30ಕ್ಕೆ ಭೋಜನ ಪೂಜೆಯ ನಂತರ ಶ್ರೀಕ್ಷೇತ್ರದ  ಅಯ್ಯಪ್ಪಸ್ವಾಮಿಯ ಮುಂದೆ ವಿಷುಕಣಿ ಸಿದ್ಧಗೊಳ್ಳಲಿದೆ. ಬಳಿಕ ಹರಿವರಾಸನಂ ಹಾಡುವ ಮೂಲಕ ಬಾಗಿಲು ಮುಚ್ಚಲಾಗುವುದು. ನಂತರ ನಾಳೆ ಬೆಳಗ್ಗೆ 4 ಗಂಟೆಗೆ ಬಾಗಿಲು ತೆರೆಯಲಾಗುವುದು. ದೇಗುಲ ತೆರೆದು ದೀಪಗಳನ್ನು ಬೆಳಗಿಸಿ ಅಯ್ಯಪ್ಪ ದರ್ಶನ ಮಾಡಲಾಗುವುದು. ನಂತರ ಭಕ್ತರಿಗೆ ವಿಷುಕಣಿ ದರ್ಶನವಾಗುತ್ತದೆ. ತಂತ್ರಿ ಮತ್ತು ಮೇಲ್ಶಾಂತಿ ಭಕ್ತರಿಗೆ ವಿಷು ಉಡುಗೊರೆ ಹಂಚುವರು. 

              ಬೆಳಗ್ಗೆ 7ರವರೆಗೆ ವಿಷುಕಣಿ ದರ್ಶನ ದೊರೆಯಲಿದೆ. ಬಳಿಕ ಎಂದಿನಂತೆ ಅಭಿಷೇಕ, ಉಷಃಪೂಜೆ ನಡೆಯುತ್ತದೆ. ಬೆಳಗ್ಗೆ 8ರಿಂದ 11ರವರೆಗೆ ತುಪ್ಪಾಭಿಷೇಕ ನಡೆಯಲಿದೆ. ರಾತ್ರಿ 11 ಗಂಟೆಗೆ ಹರಿವರಾಸನ ಗಾಯನ ನಡೆಯಲಿದೆ. 18ರಂದು ವಿಷು ಹಾಗೂ ಮೇಷಮಾಸ ಪೂಜೆಗಳನ್ನು ಮುಗಿಸಿ ರಾತ್ರಿ 10 ಗಂಟೆಗೆ ಬಾಗಿಲು ಮುಚ್ಚಲಾಗುತ್ತದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries