ಕಾಸರಗೋಡು: ಯುವ ಜನತೆಯಲ್ಲಿ ಚುನಾವಣಾ ಜಾಗೃತಿಯನ್ನು ಮೂಡಿಸುವುದರ ಅಂಗವಾಗಿ ಭಾರತ ಚುನಾವಣಾ ಆಯೋಗವು ಸ್ವೀಪ್ ನೇತೃತ್ವದಲ್ಲಿ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯವನ್ನು ಆಯೋಜಿಸಿತ್ತು.
ಉಳಿಯತ್ತಡ್ಕ ಗ್ರೀನ್ ಫೀಲ್ಡ್ ಟರ್ಫ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯಾಟದಲ್ಲಿ ವಿವಿಧ ಇಲಾಖೆಗಳನ್ನು ಹಾಗೂ ಕುಟುಂಬಶ್ರೀ ಘಟಕಗಳನ್ನು ಪ್ರತಿನಿಧಿಸುವ 6 ತಂಡಗಳು ಭಾಗವಹಿಸಿದ್ದವು. ಸಹಾಯಕ ಜಿಲ್ಲಾಧಿಕಾರಿ ದಿಲೀಪ್ ಕೆ ಕೈನಿಕರ ಪಂದ್ಯಾಟ ಉದ್ಘಾಟಿಸಿದರು. ಸ್ವೀಪ್ ನೋಡಲ್ ಅಧಿಕಾರಿ ಟಿ.ಟಿ.ಸುರೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಡಿ.ಹರಿದಾಸ್, ಬೈಜು, ಸುಮಾ, ಪಿ.ರತ್ನೇಶ್, ಎಂ.ಶೀಬಾ, ಇ.ಶಿಬಿ, ಟಿ.ಪಿ.ಆದಿರ, ಸಫಾ ಮುರ್ಷಿದಾ ನೇತೃತ್ವ ನೀಡಿದರು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ನಗದು ಬಹುಮಾನ ನೀಡಲಾಯಿತು.