HEALTH TIPS

ಮತ್ತೆ ಕಾಡಾನೆ ದಾಳಿ; ಪತ್ತನಂತಿಟ್ಟದಲ್ಲಿ ಕಾಡಾನೆ ದಾಳಿಗೆ ಓರ್ವ ಮೃತ್ಯು

                   ಪತ್ತನಂತಿಟ್ಟ: ರಾಜ್ಯದಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬರು ಬಲಿಯಾಗಿದ್ದಾರೆ. ರಾನ್ನಿ ತುಳಪಲ್ಲಿ ಮೂಲದ ಬಿಜು (52) ಮೃತರು.

                    ಮನೆ ಬಳಿ ಬಂದ ಕಾಡಾನೆಯನ್ನು ಓಡಿಸಲು ಯತ್ನಿಸುತ್ತಿದ್ದಾಗ ದಾಳಿ ನಡೆದಿದೆ. ಬೆಳಗಿನ ಜಾವ 1:30ರ ಸುಮಾರಿಗೆ ಈ ಘಟನೆ ನಡೆದಿದೆ.

                ಮನೆಯ ಅಂಗಳದಲ್ಲಿ ಬೆಳೆ ನಾಶಪಡಿಸುವ ಸದ್ದು ಕೇಳಿ ಬಿಜು ಹೊರ ಬಂದರು. ಆದರೆ ಅದು ಆನೆ ಎಂಬುದು ಅವರಿಗೆ ಗೊತ್ತಿರಲಿಲ್ಲ. ಓಡಿಸಲು ಯತ್ನಿಸುತ್ತಿದ್ದಾಗ ಆನೆ ಬಿಜುವಿನತ್ತ ನುಗ್ಗಿತು. ಮನೆಯ ಹಿಂಭಾಗದಿಂದ 50 ಮೀಟರ್ ದೂರದಲ್ಲಿ ಬಿಜು ಶವವಾಗಿ ಪತ್ತೆಯಾಗಿದ್ದಾರೆ. ಮಾಹಿತಿ ಪಡೆದು ಪಂಬಾ ಪೋಲೀಸರು ಹಾಗೂ ಕನ್ಮಲಾ ಅರಣ್ಯ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.

                 ಘಟನೆಯಿಂದ ಹಲವೆಡೆ ಸಾರ್ವಜನಿಕರ ಆಕ್ರೋಶ ಹೆಚ್ಚುತ್ತಿದೆ ಎಂದು ವರದಿಯಾಗಿದೆ. ಶವವನ್ನು ಸ್ಥಳದಿಂದ ತೆಗೆಯಲು ಪೋಲೀಸರಿಗೆ ಮನೆಯವರು ಬಿಡಲಿಲ್ಲ. ಜಿಲ್ಲಾಧಿಕಾರಿ ಮತ್ತಿತರರು ಸ್ಥಳಕ್ಕೆ ಬರಬೇಕು ಎಂಬುದು ಸ್ಥಳೀಯರ ಆಗ್ರಹ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries