HEALTH TIPS

ಜಿಲ್ಲಾ ಮಟ್ಟದ ಮಾಧ್ಯಮ ಕೇಂದ್ರಕ್ಕೆ ಜನರಲ್ ಒಬ್ಸರ್ವರ್ ರಿಶಿರೇಂದ್ರ ಕುಮಾರ್ ಭೇಟಿ

                 ಕಾಸರಗೋಡು: ಲೋಕಸಭಾ ಚುನಾವಣೆಯ ಅಂಗವಾಗಿ, ಕಾಸರಗೋಡು ಲೋಕಸಭಾ ಕ್ಷೇತ್ರದ ಜನರಲ್ ಒಬ್ಸರ್ವರ್ ರಿಷಿರೇಂದ್ರ ಕುಮಾರ್ ಅವರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾರ್ಯಾಚರಿಸುತ್ತಿರುವ ಜಿಲ್ಲಾ ಮಾಹಿತಿ ಕೇಂದ್ರದ ಪಿಆರ್ ಚೇಂಬರ್‍ನಲ್ಲಿ ಸ್ಥಾಪಿಸಲಾದ ಜಿಲ್ಲಾ ಮಟ್ಟದ ಮಾಧ್ಯಮ ಕೇಂದ್ರಕ್ಕೆ ಭೇಟಿ ನೀಡಿದರು.

              ಸಾಮಾಜಿಕ ಮಾಧ್ಯಮ, ಮುದ್ರಣ, ದೃಶ್ಯ ಮತ್ತು ಡಿಜಿಟಲ್ ಮಾಧ್ಯಮಗಳ ಮೇಲೆ ಎಚ್ಚರಿಕೆಯಿಂದ ನಿಗಾ ಇರಿಸುವಂತೆ ಅವರು ಸಿಬ್ಬಂದಿಗೆ ಸಲಹೆ ನೀಡಿದರು.  ಪೇಯ್ಡ್ ನ್ಯೂಸ್, ಮಾದರಿ ನೀತಿ ಸಂಹಿತೆ ಉಲ್ಲಂಘನೆ ಕುರಿತಾದ ಮಾಧ್ಯಮ ವರದಿಗಳು, ರಾಜಕೀಯ ಜಾಹೀರಾತುಗಳು, ಅನುಮತಿ ಇತ್ಯಾದಿಗಳ ಬಗ್ಗೆ ಮಾಹಿತಿ  ಪಡೆದುಕೊಂಡರು.

           ಎಂಸಿಎಂಸಿ ಸದಸ್ಯ ಕಾರ್ಯದರ್ಶಿಯೂ,  ಜಿಲ್ಲಾ ಮಾಹಿತಿ ಕೇಂದ್ರದ ಅಧಿಕಾರಿಯೂ ಆದ ಎಂ.ಮಧುಸೂದನನ್ ಅವರು ಮಾಧ್ಯಮ ಕೇಂದ್ರ, ಮಾಧ್ಯಮ ಪ್ರಮಾಣೀಕರಣ ಮತ್ತು ಮೇಲ್ವಿಚಾರಣಾ ಸಮಿತಿ ಮತ್ತು ಸಾಮಾಜಿಕ ಮಾಧ್ಯಮ ಕೋಶದ ಚಟುವಟಿಕೆಗಳ ಬಗ್ಗೆ ರಿಷಿರೇಂದ್ರ ಕುಮಾರ್ ಅವರಿಗೆ ವಿವರಿಸಿದರು.  ಎಂಸಿಎಂಸಿ ಸದಸ್ಯರಾದ  ಜಿಲ್ಲಾ ಕಾನೂನು ಅಧಿಕಾರಿ ಕೆ.ಮುಹಮ್ಮದ್ ಕುಞÂ,  ಐಟಿ ಮಿಷನ್ ಜಿಲ್ಲಾ ಕಾರ್ಯಕ್ರಮ ನಿರ್ವಾಹಕ ಕಪಿಲ್ ದೇವ್, ನಿರೀಕ್ಷಕರ ನೋಡಲ್ ಅಧಿಕಾರಿ ಲಿಜೋ ಜೋಸೆಫ್, ಎಂಸಿಎಂಸಿ ವಿಭಾಗದ ಅನುವಾದಕ ಶಿಕ್ಷಕರು, ಎಂಸಿಎಂಸಿ ಸಿಬ್ಬಂದಿ ಮತ್ತಿತರರು ಭಾಗವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries