ಬದಿಯಡ್ಕ: ನೀರ್ಚಾಲು ಸಮೀಪದ ಬೇಳ ಕುಮಾರಮಂಗಲ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಅಖಿಲ ಕೇರಳ ತಂತ್ರಿ ಸಮಾಜ ಉತ್ತರ ವಲಯ ಸಮಿತಿಯ ನೇತೃತ್ವದಲ್ಲಿ ಮೇ 6 ರ ವರೆಗೆ ನಡೆಯುತ್ತಿರುವ 10 ದಿನಗಳ ರಜಾ ಕಾಲದ ಸಂಸ್ಕøತ ಸಂವಾದ ಶಿಬಿರದ ಅಂಗವಾಗಿ ಮೇ 5 ರಂದು ಬೆಳಗ್ಗೆಯಿಂದ ಒಂದು ದಿನದ ಸಂಸ್ಕøತ ಸಂವಾದ ಶಿಬಿರ ಸಾರ್ವಜನಿಕರಿಗೆ ನಡೆಯಲಿರುವುದು. ಈ ಶಿಬಿರದಲ್ಲಿ ಭಾಗವಹಿಸಲು ಸಾರ್ವಜನಿಕರಿಗೆ ಮುಕ್ತ ಅವಕಾಶ ನೀಡಲಾಗಿದೆ.
ಕಾಸರಗೋಡಿನಿಂದ ತಿರುವನಂತಪುರದವರೆಗಿನ ಋಗ್ವೇದ, ಯಾಜುರ್, ಸಾಮ ವೇದ ಪದ್ದತಿಯ ಸುಮಾರು 50 ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ.
ಸಮಾಪನ ದಿನದಂದು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಯವರು ಭಾಗವಹಿಸಿ ಶಿಬಿರಾರ್ಥಿಗಳಿಗೆ ಆಶೀರ್ವದಿಸಲಿದ್ದಾರೆ.




.jpg)
