HEALTH TIPS

ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಕಾರ್ಯಕ್ಷಮತೆ-ಊರಾಲುಂಗಾಲ್ ಸೊಸೈಟಿಗೆ ಅಂಗೀಕಾರ

                 ಕಾಸರಗೋಡು: ಉರಾಲುಂಗಲ್ ಲೇಬರ್ ಕಾಂಟ್ರಾಕ್ಟ್ ಕೋಆಪರೇಟಿವ್ ಸೊಸೈಟಿಯ ಅತ್ಯುತ್ತಮ ಕಾರ್ಯಕ್ಷಮತೆಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‍ಎಚ್‍ಎಐ)ದ ಅಂಗೀಕಾರ ಲಭಿಸಿದೆ. ಸಂಸ್ಥೆಗಿರುವ ಅತ್ಯುತ್ತಮ ಸಾಧಕ ಪ್ರಶಸ್ತಿಯನ್ನು ಪ್ರಾಧಿಕಾರದ ಅಧ್ಯಕ್ಷ ಸಂತೋಷಕುಮಾರ ಯಾದವ್ ಅವರು ಉರಾಲುಂಗಲ್ ಸೊಸೈಟಿ ಅಧ್ಯಕ್ಷ ರಮೇಶ ಪಾಲೇರಿ ಅವರಿಗೆ ತಿರುವನಂತಪುರದಲ್ಲಿ ನಡೆದ ಸಮಾರಂಭದಲ್ಲಿ ಹಸ್ತಾಂತರಿಸಿದರು.  ರಾಜ್ಯದ 20ಕ್ಕೂ ಹೆಚ್ಚು ರೀಚ್‍ಗಳಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ಆರು ಲೇನ್‍ಗಳಾಗಿ ಅಭಿವೃದ್ಧಿಪಡಿಸುವ ಕಾರ್ಯದಲ್ಲಿ ದೇಶದ ಪ್ರಮುಖ ನಿರ್ಮಾಣ ಕಂಪನಿಗಳಿಗಿಂತ ಉತ್ತಮವಾಗಿ ಕಾರ್ಯನಿರ್ವಹಿಸುವ ಮೂಲಕ ಊರಾಲುಂಗಾಲ್ ಗುರುತಿಸಲ್ಪಟ್ಟಿದೆ. ಪ್ರಸಕ್ತ ತಲಪ್ಪಾಡಿಯಿಂದ ಚೆರ್ಕಳ ವರೆಗಿನ ಷಟ್ಪಥ ಕಾಮಗಾರಿಯನ್ನು ಉರಾಲುಂಗಾಲ್ ಸಂಸ್ಥೆ ನಡೆಸುತ್ತಿದೆ.

                  ಸೊಸೈಟಿಯ ಸಮರ್ಪಣಾ, ಸಮಯೋಚಿತತೆ, ಗುಣಮಟ್ಟದ ಕೆಲಸಗಾರಿಕೆ ಮತ್ತು ಯೋಜನಾ ನಿರ್ವಹಣೆಯಲ್ಲಿನ ಶ್ರೇಷ್ಠತೆಯನ್ನು ಗುರುತಿಸಿ ಈ ಮನ್ನಣೆ ನೀಡಲಾಗಿದೆ.   ಸಮಾರಂಭದಲ್ಲಿರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸದಸ್ಯ (ಪಿಪಿಪಿ) ವೆಂಕಟರಮಣ, ಪ್ರಾದೇಶಿಕ ಅಧಿಕಾರಿ ಬಿ. ಎಲ್. ಮೀನಾ, ಯುಎಲ್‍ಸಿಸಿಎಸ್ ಎಂಡಿ ಎಸ್. ಶಾಜು, ಪ್ರಾಜೆಕ್ಟ್ ಮ್ಯಾನೇಜರ್ ನಾರಾಯಣನ್, ಸಂಸ್ಥೆ ಪ್ರತಿನಿಧಿ ಟಿ. ಪಿ ಕಿಶೋರ್ ಕುಮಾರ್, ಸಿಜಿಎಂ ರೋಹನ್ ಪ್ರಭಾಕರ್, ಜಿಎಂ ರೋಡ್ಸ್ ಪಿ. ಶೈನು ಉಪಸ್ಥಿತರಿದ್ದರು.


 


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries