HEALTH TIPS

ಕೂಡ್ಲು ಗಂಗೆ ಬಯಲಲ್ಲಿ ಗ್ರಾಮೋತ್ಸವ ಕ್ರೀಡಾಕೂಟ-ಕೆಸರುಗದ್ದೆಯಲ್ಲಿ ಮಿಂದೆದ್ದ ಕ್ರೀಡಾಪ್ರೇಮಿಗಳು

           ಕಾಸರಗೋಡು: ನಗರದ ಕೇಳುಗುಡ್ಡೆ ಸನಿಹದ ಗುಡ್ಡೆ ದೇವಸ್ಥಾನ, ಗಂಗೆ ಮತ್ತು ಕೂಡ್ಲು ಪ್ರದೇಶದ ಕ್ರೀಡಾಪ್ರೇಮಿಗಳಿಗಾಗಿ ಕೆಸರುಗದ್ದೆಯಲ್ಲಿ ಒಂದು ದಿನದ ಕ್ರೀಡಾಕೂಟ'ಗ್ರಾಮೋತ್ಸವ ಗಂಗೆ ಸನಿಹದ ಭತ್ತದ ಬಯಲು ಪ್ರದೇಶದ ಕೆಸರುಗದ್ದೆಯಲ್ಲಿ ನಡೆಯಿತು. 


        ಕೇಳುಗುಡ್ಡೆ ಅಯ್ಯಪ್ಪ ಭಜನಾ ಮಂದಿರದ ಅರ್ಚಕ ಸತ್ಯನಾರಾಯಣ ಅಡಿಗ ಸಮಾರಂಭ ಉದ್ಘಾಟಿಸಿದರು. ಮಧೂರು ಗ್ರಾಮ ಪಂಚಾಯತ್ ಸದಸ್ಯೆ ಸೌಮ್ಯಾ ಅಧ್ಯಕ್ಷತೆ ವಹಿಸಿದ್ದರು. ಕೇಳುಗುಡ್ಡೆ ಶ್ರೀ ಅಯ್ಯಪ್ಪ ಭಜನಾಮಂದಿರದ ಗುರುಸ್ವಾಮಿ ಶ್ರೀಧರವಸಂತ ಮತ್ತು ರವಿಚಂದ್ರ ಉಪಸ್ಥಿತರಿದ್ದರು. ನಂತರ ಕೆಸರುಗದ್ದೆಯಲ್ಲಿ ಹಿರಿಯರಿಗೆ, ಮಹಿಳೆಯರಿಗೆ ಹಾಗೂ ಮಕ್ಕಳಿಗಾಗಿ ಪ್ರತ್ಯೇಕ ಕ್ರೀಡಾಕೂಟ ನಡೆಯಿತು. ಹಗ್ಗಜಗ್ಗಾಟ, ಕೆಸರಿನಲ್ಲಿ ಹಾಳೆ ಎಳೆಯುವ ಸ್ಪರ್ಧೆ, ಕೆಸರಿನಲ್ಲಿ ಓಟ ಸೇರಿದಂತೆ ವಿವಿಧ ಕ್ರೀಡೆಗಳು ನಡೆಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಬಿಎಂಎಸ್ ರಾಜ್ಯ ಉಪಾಧ್ಯಕ್ಷ ವಕೀಲ ಪಿ.ಮುರಳೀಧರನ್ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಜಿಲ್ಲಾ ಆಸ್ಪತ್ರೆಯ ಮಹಿಳಾ ವಿಭಾಗದ ತಜ್ಞ ವೈದ್ಯೆ ಎಚ್.ಅರ್ಚನಾ, ಮಧೂರು ಗ್ರಾಮ ಪಂಚಾಯಿತಿ ಅಭಿವದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಧಾಕೃಷ್ಣ ಸೂರ್ಲು, ಪಿಡಬ್ಲ್ಯುಡಿ ವಿದ್ಯುತ್ ಗುತ್ತಿಗೆದಾರ ಜಯಚಂದ್ರನ್,  ರವೀಂದ್ರ, ಎ.ಟಿ.ನಾಯ್ಕ್, ಅನೀಶ್ ರೈ, ಕೆ.ಆರ್.ಹರೀಶ್ ಉಪಸ್ಥಿತರಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries