ಢಾಕಾ: ಬಾಂಗ್ಲಾದೇಶದ ನಿವೃತ್ತ ನ್ಯಾಯಮೂರ್ತಿಯೊಬ್ಬರು ಪಲಾಯನಕ್ಕೆ ಯತ್ನಿಸುತ್ತಿದ್ದ ವೇಳೆ ಈಶಾನ್ಯ ಗಡಿ ಭಾಗದ ಸಿಲೆಟ್ ಎಂಬಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು 'ಬಾರ್ಡರ್ ಗಾರ್ಡ್ ಬಾಂಗ್ಲಾದೇಶ್' (ಬಿಜಿಬಿ) ಶುಕ್ರವಾರ ಹೇಳಿದೆ.
0
samarasasudhi
ಆಗಸ್ಟ್ 24, 2024
ಢಾಕಾ: ಬಾಂಗ್ಲಾದೇಶದ ನಿವೃತ್ತ ನ್ಯಾಯಮೂರ್ತಿಯೊಬ್ಬರು ಪಲಾಯನಕ್ಕೆ ಯತ್ನಿಸುತ್ತಿದ್ದ ವೇಳೆ ಈಶಾನ್ಯ ಗಡಿ ಭಾಗದ ಸಿಲೆಟ್ ಎಂಬಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು 'ಬಾರ್ಡರ್ ಗಾರ್ಡ್ ಬಾಂಗ್ಲಾದೇಶ್' (ಬಿಜಿಬಿ) ಶುಕ್ರವಾರ ಹೇಳಿದೆ.
ಮಧ್ಯರಾತ್ರಿವರೆಗೂ ಅವರನ್ನು ಬಿಜಿಬಿ ಔಟ್ಪೋಸ್ಟ್ನಲ್ಲಿ ಇರಿಸಲಾಗಿತ್ತು ಎಂದು ಪ್ರೋತೋಮ್ ಪತ್ರಿಕೆ ವರದಿ ಮಾಡಿದೆ.
ಮೀಸಲಾತಿ ಸಂಬಂಧ ಬಾಂಗ್ಲಾದೇಶದಲ್ಲಿ ನಡೆದ ಪ್ರತಿಭಟನೆ ತೀವ್ರ ಸ್ವರೂಪ ಪಡೆದುಕೊಂಡಿತ್ತು. ಪರಿಣಾಮ ಆಗಸ್ಟ್ 5ರಂದು ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಿ ಶೇಖ್ ಹಸೀನಾ ಭಾರತಕ್ಕೆ ಪಲಾಯನ ಮಾಡಿದ್ದರು.
ಆಗಸ್ಟ್ 5ರ ಬಳಿಕ, ಹಿರಿಯ ಮಂತ್ರಿಗಳು ಸೇರಿದಂತೆ ಪದಚ್ಯುತ ಆಡಳಿತದ ಹಲವಾರು ನಾಯಕರನ್ನು ಬಂಧಿಸಲಾಗಿದೆ. ಅವರಲ್ಲಿ ಬಹುತೇಕರ ಮೇಲೆ ಕೊಲೆ ಆರೋಪ ಇದೆ. ಹಸೀನಾ ಅವರ ಅವಾಮಿ ಲೀಗ್ ಪಕ್ಷದ ನಾಯಕರು ದಂಡು ಪ್ರದೇಶದಲ್ಲಿ ಆಶ್ರಯ ಪಡೆದುಕೊಂಡಿದ್ದಾರೆ ಎಂದು ಸೇನೆ ಈ ಹಿಂದೆ ಹೇಳಿತ್ತು.