HEALTH TIPS

ಕೇರಳದಲ್ಲಿ ಕ್ವಾರಿಗಳನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಬೇಕು: ಪರಿಸರ ಹೋರಾಟಗಾರ ಮಾಧವ್ ಗಾಡ್ಗೀಳ್

            ಕಲ್ಪೆಟ್ಟ: ಕೇರಳದಲ್ಲಿ ಶೇ.2ರಷ್ಟು ಕ್ವಾರಿಗಳು ಅಕ್ರಮವಾಗಿ ನಡೆಯುತ್ತಿದ್ದು, ಸಂಪೂರ್ಣ ಕ್ವಾರಿಗಳನ್ನು ಸರ್ಕಾರ ವಹಿಸಬೇಕು ಎಂದು ಪರಿಸರ ಹೋರಾಟಗಾರ ಮಾಧವ ಗಾಡ್ಗೀಳ್ ಹೇಳಿರುವರು.

            ಎಷ್ಟು ಕ್ವಾರಿಗಳು ಚಾಲ್ತಿಯಲ್ಲಿವೆ ಎಂಬ ನಿಖರ ಲೆಕ್ಕ ಸರ್ಕಾರದ ಬಳಿ ಇಲ್ಲ ಎಂದವರು ಬೊಟ್ಟುಮಾಡಿರುವರು.

        ಮಾಧವ್ ಗಡ್ಡಿಲ್ ಅವರು ಕಲ್ಪೆಟ್ಟಾದಲ್ಲಿ ನೇಚರ್ ಕನ್ಸರ್ವೇಶನ್ ಸೊಸೈಟಿ ವತಿಯಿಂದ ನಡೆದ ಪರಿಸರ ಸಂರಕ್ಷಣಾ ಸಮಾವೇಶದಲ್ಲಿ ವಿಡಿಯೋ ಸಂದೇಶದ ಮೂಲಕ ಮಾತನಾಡಿ ಈ ಬಗ್ಗೆ ತಿಳಿಸಿದರು.

             ಕೇರಳದಲ್ಲಿ ಕ್ವಾರಿಗಳ ಕಾರ್ಯಾಚರಣೆ ಮತ್ತು ಪರಿಸರ ಶೋಷಣೆಯನ್ನು ಟೀಕಿಸಿದ ಮಾಧವ್ ಗಾಡ್ಗೀಳ್ ಅವರು ವಯನಾಡಿನಲ್ಲಿ ಸಂಭವಿಸಿದ ದುರಂತದಲ್ಲಿ ಸಂತ್ರಸ್ತರಿಗೆ 25,000 ರೂ ನೀಡುವುದಾಗಿ ಘೋಷಿಸಿದರು. ವಯನಾಡಿನಲ್ಲಿ ಭೂಕುಸಿತದಿಂದ ಸಂತ್ರಸ್ತರ ಪುನರ್ವಸತಿ ಸಮರ್ಪಕವಾಗಿ ಜಾರಿಯಾಗಬೇಕಿದೆ. ಈ ಹಿಂದೆ ಸಂಭವಿಸಿದ ಇಂತಹ ಪ್ರಕೃತಿ ವಿಕೋಪಗಳಲ್ಲಿ ಪುನರ್ವಸತಿ ಸರಿಯಾಗಿ ನಡೆದಿಲ್ಲ. ಇದು ಬದಲಾಗಬೇಕು ಎಂದು ಸೂಚಿಸಿದರು.

            ಕೇರಳದ ಕ್ವಾರಿಗಳ ನಿರ್ವಹಣೆಯನ್ನು ಸರ್ಕಾರ ವಹಿಸಿ ಕುಟುಂಬಶ್ರೀ ಸಂಘಗಳಿಗೆ ಹಸ್ತಾಂತರಿಸಬೇಕು. ದೊಡ್ಡ ದೊಡ್ಡ ರೆಸಾರ್ಟ್‍ಗಳು ಪ್ರಕೃತಿಯ ಮೇಲೆ ಪ್ರಭಾವ ಬೀರುತ್ತಿವೆ ಎಂದು ಅವರು ಹೇಳಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries