HEALTH TIPS

ಕಾಶ್ಮೀರಿ ಪಂಡಿತರಿಲ್ಲದೆ ಕಾಶ್ಮೀರ ಅಪೂರ್ಣ: ಕೇಂದ್ರ ಸಚಿವ ಜಿತೇಂದ್ರ ಸಿಂಗ್‌

 ಮ್ಮು: ಕಾಶ್ಮೀರಿ ಪಂಡಿತರ ಅನುಪಸ್ಥಿತಿಗೆ ಕಾಶ್ಮೀರದ ಬಹುಸಂಖ್ಯಾತ ಮುಸ್ಲಿಂ ಸಮುದಾಯ ಒಂದು ದಿನ ವಿಷಾದಿಸಲಿದೆ. ಕಾಶ್ಮೀರಿ ಪಂಡಿತರಿಲ್ಲದೆ ಕಾಶ್ಮೀರ ಅಪೂರ್ಣ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಪ್ರತಿಪಾದಿಸಿದ್ದಾರೆ.

ಇಲ್ಲಿಯ ಗಾಂಧಿ ಮೆಮೋರಿಯಲ್‌ ಕಾಲೇಜಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಂಗ್‌, 'ಕಾಶ್ಮೀರಿ ಪಂಡಿತರಿಲ್ಲದೆ ಕಾಶ್ಮೀರವು ಪೂರ್ಣವಾಗುವುದಿಲ್ಲ.

ಅವರಿದ್ದ ಕಾರಣ ಕಾಶ್ಮೀರದಲ್ಲಿ ಸಂಸ್ಕೃತಿಯ ಉಳಿದಿದೆ. ಇತರ ಸಮುದಾಯಗಳೊಂದಿಗೆ ಸಾಮರಸ್ಯದಿಂದ ಬದುಕುವ ಮೂಲಕ ಪಂಡಿತರು ಕಣಿವೆ ರಾಜ್ಯದ ಪರಂಪರೆಯನ್ನು ಜೀವಂತವಾಗಿರಿಸಿದ್ದಾರೆ' ಎಂದರು

'ಒಂದು ಕಾಲದಲ್ಲಿ ಮಕ್ಕಳಿಗೆ ನೀಡುತ್ತಿದ್ದ ಮೌಲ್ಯಗಳು ಇಂದು ಮರೆಯಾಗುತ್ತಿವೆ. ತಕ್ಷಣವೇ ಎಚ್ಚೆತ್ತುಕೊಳ್ಳದಿದ್ದರೆ, ಎರಡು ಅಥವಾ ಮೂರು ತಲೆಮಾರುಗಳ ಬಳಿಕ ಮರುಕಪಡುವ ಸ್ಥಿತಿ ಎದುರಾಗಲಿದೆ. ಪಂಡಿತರ ವಲಸೆಗೆ ಕಾಶ್ಮೀರದ ಬಹುಸಂಖ್ಯಾತ ಮುಸ್ಲಿಂ ಸಮುದಾಯವು ವಿಷಾದಿಸುವ ದಿನ ಶೀಘ್ರವಾಗಿಯೇ ಬರಲಿದೆ. ಇದನ್ನು ನಾನು ಯಾವುದೇ ಹಿಂಜರಿಕೆಯಿಲ್ಲದೆ ಹೇಳುತ್ತಿದ್ದೇನೆ' ಎಂದು ಹೇಳಿದರು.

'370ನೇ ವಿಧಿಯಡಿ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ಸಕಾರಾತ್ಮಕ ಬೆಳವಣಿಗೆಗಳಾಗಿವೆ. ಕಾಶ್ಮೀರಿ ಮುಸ್ಲಿಮರು ಸೇರಿದಂತೆ ಸಾಮಾನ್ಯ ಜನರೂ ಇದರ ಬಗ್ಗೆ ಸಂತೋಷಪಡುತ್ತಾರೆ' ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries