ಕಾಸರಗೋಡು: ಜಿಲ್ಲೆಯನ್ನು ನಡುಗಿಸಿರುವ ಪೆರಿಯ ಕಲ್ಯೋಟ್ ಅವಳಿ ಕೊಲೆ ಪ್ರಕರಣದ ಮುಂದಿನ ಪರಿಗಣನೆಯನ್ನು ಎರ್ನಾಕುಳಂ ಸಿಬಿಐ ನ್ಯಾಯಾಲಯ ಡಿ. 23ಕ್ಕೆ ಮುಂದೂಡಿದೆ. ಕೊಲೆ ಪ್ರಕರಣದ ತೀರ್ಪು ಈ ದಿನದಂದು ಘೋಷಣೆಯಾಗುವ ಸಆಧ್ಯತೆಯಿದೆ.
2019 ಫೆ. 17ರಂದು ಪೆರಿಯ ಕಲ್ಯೋಟ್ ನಿವಾಸಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರಾದ ಶರತ್ಲಾಲ್ ಹಾಗೂ ಕೃಪೇಶ್ ಅವರನ್ನು ತಂಡವೊಂದು ಬರ್ಬರವಾಗಿ ಕಡಿದು ಕೊಲೆಗೈದಿತ್ತು. ಪ್ರಕರಣದಲ್ಲಿ 24ಮಂದಿ ಆರೋಪಿಗಳಿದ್ದು, ಇವೆರೆಲ್ಲರೂಸಿಪಿಎಂ ಕಾರ್ಯಕರ್ತರಾಗಿದ್ದಾರೆ.




