HEALTH TIPS

ಕಾಲಾಕಾಲಕ್ಕೆ ನಡೆಸಿದ ಸಿದ್ಧತೆ ಕಾರಣ ಯಶಸ್ಸು: ಸಚಿವ ವಿ.ಎನ್.ವಾಸವನ್

ಕೊಟ್ಟಾಯಂ: ದೂರುರಹಿತ, ಗೊಂದಲ ರಹಿತ ಈ ಬಾರಿಯ ಶಬರಿಮಲೆ ಮಂಡಲ ಪೂಜೆ  ಯಶಸ್ವಿಯಾಗಲು ಪೂರ್ವಭಾವಿಯಾಗಿ ನಡೆಸಿದ ಸಿದ್ಧತೆ ಮತ್ತು ಸಾಮೂಹಿಕ ಚಟುವಟಿಕೆಗಳ ಫಲವೇ ಕಾರಣ ಎಂದು ದೇವಸ್ವಂ ಸಚಿವ ವಿ.ಎನ್.ವಾಸವನ್ ಹೇಳಿದ್ದಾರೆ.
ಶಬರಿಮಲೆ ಸನ್ನಿಧಾನಕ್ಕೆ ಮಂಡಲ ಪೂಜೆ ವ್ಯವಸ್ಥೆ ಮತ್ತು ಮಕರ ಬೆಳಕು ಸಿದ್ಧತೆಗಳನ್ನು ಪರಿಶೀಲಿಸಲು ಭೇಟಿ ನೀಡಿದ ಸಂದರ್ಭದಲ್ಲಿ ಸಚಿವರು ಈ ಪ್ರತಿಕ್ರಿಯೆ ನೀಡಿದರು.
ಒಂದು ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳು ಆಗಮಿಸಿದ್ದರು.  ಹಗಲು ಹೊತ್ತಾದರೂ ದರ್ಶನ ಸಿಗದೆ ಒಬ್ಬರೂ ವಾಪಸಾಗುವ ಪರಿಸ್ಥಿತಿ ಇದ್ದಿರಲಿಲ್ಲ ಎಂದು ಸಚಿವರು ಗಮನ ಸೆಳೆದರು.
ಮಂಡಲದ ಕೊನೆಯಲ್ಲಿ ಬಂದಿದ್ದ ಎಲ್ಲ ಅಯ್ಯಪ್ಪ ಭಕ್ತರಿಗೂ 18ನೇ ಮೆಟ್ಟಿಲು ಹತ್ತುವ ವ್ಯವಸ್ತ್ಥೆ ನಿರ್ಮಾಣವಾಗಿತ್ತು.  ರಾಜ್ಯ ಸರ್ಕಾರ ಮತ್ತು ದೇವಸ್ವಂ ಮಂಡಳಿ ಸ್ವಯಂಸೇವಾ ಸಂಸ್ಥೆಗಳನ್ನು ಒಳಗೊಂಡ ಚರ್ಚೆ ನಡೆಸಿತ್ತು.
ಕಳೆದ ವರ್ಷಕ್ಕೆ ಹೋಲಿಸಿದರೆ ಈ 41 ದಿನಗಳ ಅವಧಿಯಲ್ಲಿ ಐದು ಲಕ್ಷಕ್ಕೂ ಹೆಚ್ಚು ಭಕ್ತರು ಆಗಮಿಸಿದ್ದರು.  ತಾತ್ಕಾಲಿಕ ಅಂದಾಜಿನ ಪ್ರಕಾರ ಹಿಂದಿನ ವರ್ಷಕ್ಕಿಂತ 28 ಕೋಟಿ ರೂಪಾಯಿ ಹೆಚ್ಚು ಆದಾಯ ಬಂದಿದೆ.  ಎಲ್ಲರಿಗೂ ಅಪ್ಪಂ, ಅರವಣ ಸಿಗುವುದು ಖಚಿತ ಎಂದು ಸಚಿವರು ಹೇಳಿದರು.
ಡಿ.28ರಂದು ನಡೆಯುವ ಸಭೆಯಲ್ಲಿ ಮಕರ ಬೆಳಕು ಸಿದ್ಧತೆ ಕುರಿತು ಚರ್ಚೆ ನಡೆಯಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries