ಪತ್ತನಂತಿಟ್ಟ: ಶಬರಿಮಲೆ ದರ್ಶನಕ್ಕಾಗಿ ಸ್ಪಾಟ್ ಬುಕಿಂಗ್ ಕೌಂಟರ್ಗಳು ಜನವರಿ 19 ರವರೆಗೆ ತೆರೆದಿರುತ್ತವೆ, 19ರ ವರೆಗೂ ಮಕರವಿಳಕ್ಕು ಮಹೋತ್ಸವದ ಭಾಗವಾಗಿ ಅಯ್ಯಪ್ಪ ಭಕ್ತರಿಗೆ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ಪಂಪಾ, ನಿಲಯ್ಕಲ್, ಎರುಮೇಲಿ, ವಂಡಿಪೆರಿಯಾರ್ ಮತ್ತು ಪಂದಳಂಗಳಲ್ಲಿ ಸ್ಪಾಟ್ ಬುಕಿಂಗ್ ಸೌಲಭ್ಯಗಳು ಲಭ್ಯವಿದೆ. ಜನವರಿ 19 ರವರೆಗೆ ವರ್ಚುವಲ್ ಕ್ಯೂ ಬುಕಿಂಗ್ ಸಹ ಲಭ್ಯವಿರುತ್ತದೆ.
ಜನವರಿ 17 ರವರೆಗೆ ತಿರುವಾಭರಣ ದರ್ಶನ ಲಭ್ಯವಿರುತ್ತದೆ. ತೈಲಾಬಿಷೇಕ ಕಾರ್ಯಕ್ರಮ ಜನವರಿ 18 ರವರೆಗೆ ನಡೆಯಲಿದೆ. ಜನವರಿ 19 ರ ರಾತ್ರಿ ಮಾಳಿಗಪ್ಪುರಂನಲ್ಲಿ ಕುರುತಿ ನಡೆಯಲಿದೆ. 20 ರಂದು ಪಂದಳಂ ರಾಜಪ್ರತಿನಿಧಿ ದೇವಾಲಯಕ್ಕೆ ಭೇಟಿ ನೀಡಿ ಮಕರ ಬೆಳಕು ಮಹೋತ್ಸವವನ್ನು ಮುಕ್ತಾಯಗೊಳಿಸಲಿದ್ದಾರೆ.


