ಕುಂಬಳೆ: ಮುಜುಂಗಾವು ಶ್ರೀ ಭಾರತಿ ವಿದ್ಯಾಪೀಠದಲ್ಲಿ ಪ್ರತಿಭಾ ಭಾರತಿ ಕಾರ್ಯಕ್ರಮವನ್ನು ಮಂಗಳವಾರ ಮಕರಸಂಕ್ರಾಂತಿಯ ಆಚರಣೆಯೊಂದಿಗೆ ನಡೆಸಲಾಯಿತು. ವಿಶೇಷ ಅತಿಥಿಗಳಾಗಿ ಆಗಮಿಸಿದ ವಿದ್ಯಾಲಯದ ನೂತನ ಆಡಳಿತ ಸಮಿತಿಯ ಕಾರ್ಯದರ್ಶಿ ಹಿಳ್ಳೆಮನೆ ಸುಬ್ರಹ್ಮಣ್ಯ ಪ್ರಸಾದ್ ಇವರು ಮಾತನಾಡಿ, ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣದ ದಾಸರಾಗದೆ, ಪರೀಕ್ಷಾ ದೃಷ್ಟಿಯಿಂದಲೂ ಓದಬೇಕಾದ ಅನಿವಾರ್ಯತೆಯನ್ನು ತಮ್ಮ ಮಾತುಗಳ ಮೂಲಕ ವಿದ್ಯಾರ್ಥಿಗಳಿಗೆ ಸ್ಪಷ್ಟಪಡಿಸಿದರು. ಈ ಸಂದರ್ಭದಲ್ಲಿ ಮಕರಸಂಕ್ರಾಂತಿಯ ವಿಶೇಷವಾಗಿ ಎಳ್ಳು ಬೆಲ್ಲವನ್ನು ಹಂಚಿ, ವಿದ್ಯಾರ್ಥಿಗಳಿಗೆ ಈ ಆಚರಣೆಯ ವಿಶೇಷತೆಯನ್ನು ವಿವರಿಸಲಾಯಿತು.
ವಿದ್ಯಾಲಯದ ಎಲ್ಲಾ ತರಗತಿಯ ವಿದ್ಯಾರ್ಥಿಗಳಿಂದಲೂ ಪ್ರತಿಭಾ ಪ್ರದರ್ಶನ ನಡೆಯಿತು. ಹತ್ತನೇ ತರಗತಿಯ ವರುಣ್ ಶೌರಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಖ್ಯೋಪಾಧ್ಯಾಯ ಶ್ಯಾಮ್ ಭಟ್ ದರ್ಭೆ ಮಾರ್ಗ ಹಾಗೂ ಸಹ ಮುಖ್ಯ ಶಿಕ್ಷಕಿ ಚಿತ್ರಾಸರಸ್ವತಿ ಹಾಗೂ ಸಂಸ್ಕøತ ಅಧ್ಯಾಪಕ ಬಾಲಕೃಷ್ಣ ಶರ್ಮ ಅನಂತಪುರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಐದನೇ ತರಗತಿಯ ಕು. ಆರಾಧ್ಯ ಕೆ ಎನ್ ಸ್ವಾಗತಿಸಿ, ಒಂಬತ್ತನೇ ತರಗತಿಯ ಕು. ಅಕ್ಷರಾ ಎಂ ಬಲ್ಲಾಳ್ ವಂದಿಸಿದಳು. ಎಂಟನೇ ತರಗತಿಯ ಮಾ. ಶಾಶ್ವತ್ ಹಾಗೂ ಕು. ಚಿತ್ತಾರ ನಿರೂಪಿಸಿದರು.




.jpg)
