HEALTH TIPS

ಕಲಾಮಂಡಲಂನಲ್ಲಿ ನೇಮಕಾತಿ ಒಂದು ಆಶೀರ್ವಾದ; ನೃತ್ಯ ಶಿಕ್ಷಕರ ಸಾಲಿಗೆ ಆರ್‍ಎಲ್‍ವಿ ರಾಮಕೃಷ್ಣನ್ ಸೇರ್ಪಡೆ

ತ್ರಿಶೂರ್: ಕಲಾಭವನ್ ಮಣಿ ಅವರ ಸಹೋದರ ಆರ್.ಎಲ್.ವಿ. ರಾಮಕೃಷ್ಣನ್ ಅವರು ಕಲಾಮಂಡಲಂನಲ್ಲಿ ಭರತನಾಟ್ಯ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇರಿಕೊಂಡಿದ್ದಾರೆ.

ಕಲಾಮಂಡಲಂನಲ್ಲಿ ನೃತ್ಯ ಕಲಿಸಲು ಪುರುಷ ಶಿಕ್ಷಕರನ್ನು ನೇಮಿಸಿಕೊಂಡಿರುವುದು ಇದೇ ಮೊದಲು. ಕಲಾಮಂಡಲಂ ನಡೆಸಿದ ಸಂದರ್ಶನದಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ ಆರ್‍ಎಲ್‍ವಿ ರಾಮಕೃಷ್ಣನ್ ಅವರಿUಷೀ ನೇಮಕಾತಿ ಲಭಿಸಿದೆ. 

ಕಲಾಮಂಡಲಂನಲ್ಲಿ ತಮ್ಮ ನೇಮಕಾತಿಯನ್ನು ಆಶೀರ್ವಾದವೆಂದು ಪರಿಗಣಿಸುವುದಾಗಿ ಆರ್‍ಎಲ್‍ವಿ ರಾಮಕೃಷ್ಣನ್ ಹೇಳಿದರು. ಅವರು ಪ್ರತಿಕ್ರಿಯಿಸಿದ್ದು, ತಮಗೆ ಎಲ್ಲರ ಮೇಲೂ ಪ್ರೀತಿ ಮತ್ತು ಬಾಧ್ಯತೆ ಇದೆ ಮತ್ತು ಮಣಿ ಅಣ್ಣ ಅವರನ್ನು ಕಳೆದುಕೊಂಡಿದ್ದಕ್ಕೆ ಮಾತ್ರ ಬೇಸರವಾಗಿದೆ. ಜೀವನದಲ್ಲಿ ಎದುರಾಗುವ ಬಿಕ್ಕಟ್ಟುಗಳನ್ನು ತಾನು ಮುಂದಕ್ಕೆ ಇಡುವ ಹೆಜ್ಜೆಗಳಾಗಿ ನೋಡುತ್ತೇನೆ ಎಂದು ಅವರು ವಿವರಿಸಿದರು, ಮತ್ತು ಅದನ್ನೇ ಅವರ ಸಹೋದರ ಅವರಿಗೆ ಕಲಿಸಿದರು ಎಂದು ನೆನಪಿಸಿದರು.

2022-2024ರ ನಡುವೆ ತಮ್ಮ ಎಂಎ ಭರತನಾಟ್ಯ ಅಧ್ಯಯನ ನಡೆಸಿರುವುದಾಗಿ ಆರ್‍ಎಲ್‍ವಿ ರಾಮಕೃಷ್ಣನ್ ಸ್ಪಷ್ಟಪಡಿಸಿದ್ದಾರೆ. ಆ ನಂತರ ಕಲಾಮಂಡಲಂಗೆ ಅರ್ಜಿಗಳನ್ನು ಆಹ್ವಾನಿಸಲಾಯಿತು ಎಂದು ಅವರು ಹೇಳಿದರು. ಕಲಾಮಂಡಲಂ ನೃತ್ಯ ವಿಭಾಗದಲ್ಲಿ ಪ್ರಾರಂಭವಾದಾಗ, ಬಹಳ ಹಿಂದೆಯೇ ಎ.ಆರ್.ಆರ್. ಭಾಸ್ಕರ್ ಮತ್ತು ರಾಜರತ್ನಂ ಮಾಸ್ಟರ್ ಇಲ್ಲಿ ಶಿಕ್ಷಕರಾಗಿದ್ದರು. ಅವರ ನಂತರ, ನೃತ್ಯ ವಿಭಾಗದಲ್ಲಿ ಶಿಕ್ಷಕನಾಗಿ ಉದ್ಯೋಗ ಲಭಿಸಿರುವುದು ಅತ್ಯಂತ ಆಶೀರ್ವಾದವೆಂದು ಪರಿಗಣಿಸಿರುವುದಾಗಿ ತಿಳಿಸಿದರು. 

ಸರ್ಕಾರ, ಸಾಂಸ್ಕøತಿಕ ಇಲಾಖೆ, ಕೇರಳ ಕಲಾಮಂಡಲಂ ಆಡಳಿತ ಸಮಿತಿಯ ಸದಸ್ಯರು ಮತ್ತು ಶಿಕ್ಷಕರು ಸೇರಿದಂತೆ ಎಲ್ಲರಿಗೂ ಅವರು ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries