ಮುಳ್ಳೇರಿಯ: ಅದೂರು ಶ್ರೀಭಗವತೀ ದೇವಸ್ಥಾನದ ಪೆರುಂಕಳಿಯಾಟ ಮಹೋತ್ಸವದ ಆಹ್ವಾನಪತ್ರಿಕೆಯನ್ನು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರಿಗೆ ಪೆರುಂಕಳಿಯಾಟ ಕೇಂದ್ರ ಸಮಿತಿಯ ರಕ್ಷಾಧಿಕಾರಿ ಹಾಗೂ ಕಾಸರಗೋಡು ಪ್ರಾದೇಶಿಕ ಸಮಿತಿಯ ಅಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಕಾಸರಗೋಡು ಹಾಗೂ ಇತರ ಸದಸ್ಯರು ನೀಡಿ ಆಶೀರ್ವಾದ ಪಡೆದುಕೊಂಡರು.
ಈ ಸಂದರ್ಭ ಕಾಸರಗೋಡು ಪ್ರಾದೇಶಿಕ ಸಮಿತಿಯ ಪ್ರಧಾನ ಕಾರ್ಯದರ್ಶಿ ಪದ್ಮನಾಭ ಕಡಪ್ಪುರ, ಕಾರ್ಯದರ್ಶಿ ಉಮೇಶ ಕಾವುಗೋಳಿ, ಪ್ರಚಾರ ಸಮಿತಿ ಅಧ್ಯಕ್ಷ ಮನೋಹರ ಕೆ.ಜಿ, ವಿನು ನೆಲ್ಲಿಕುಂಜೆ, ಜಯಕೃಷ್ಣ ಸೂರ್ಲು ಉಪಸ್ಥಿತರಿದ್ದರು.


