ಮಂಜೇಶ್ವರ: ಶ್ರೀ ಕ್ಷೇತ್ರ ಸಂತಡ್ಕ ಮಾಡದ ಶ್ರೀ ಅರಸು ಸಂಕಲ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವದ ಪ್ರಯುಕ್ತ ಮೂಡಂಬೈಲಿನ ವಾಗ್ದೇವೀ ಯಕ್ಷಗಾನ ಕಲಾಸಂಘದಿಂದ 'ಮಾಗಧ ವಧೆ' ಕಥಾಭಾಗದ ತಾಳಮದ್ದಳೆ ಮಂಗಳವಾರ ಜರಗಿತು. ಪಾತ್ರವರ್ಗದಲ್ಲಿ ಸಂಜೀವ ಶೆಟ್ಟಿ ಚಟ್ಲ, ನಾರಾಯಣ ಪೂಜಾರಿ ಬೆಜ್ಜಂಗಳ, ನಾರಾಯಣ ನಾವಡ ಮೂಡಂಬೈಲು, ವೇಣುಗೋಪಾಲ ಶೆಟ್ಟಿ ಮೀನಾರು, ವಿನಯ್ ಮೀಯಪದವು, ಶಾಶ್ವತಿ ಯನ್. ನಾವಡ ಮೂಡಂಬೈಲು ಹಾಗೂ ಶಾರ್ವರಿ ಯನ್ ನಾವಡ ಮೂಡಂಬೈಲು ಭಾಗವಹಿಸಿದರು.
ಹಿಮ್ಮೇಳದಲ್ಲಿ ಭಾಗವತರಾಗಿ ರವಿಶಂಕರ್ ಮಧೂರು ಹಾಗೂ ವಿಘ್ನೇಶ್ ಮೀಯಪದವು, ಚೆಂಡೆಯಲ್ಲಿ ಗೋಪಾಲಕೃಷ್ಣ ನಾವಡ ಮಧೂರು ಮತ್ತು ಮೃದಂಗದಲ್ಲಿ ಮುರಳೀ ಮಾಧವ ಮಧೂರು ಸಹಕರಿಸಿದರು.

.jpg)
