HEALTH TIPS

ಸುಳ್ಳು ಸುದ್ದಿಯಿಂದ ಚುನಾವಣಾ ಪ್ರಕ್ರಿಯೆ ವಿಶ್ವಾಸಾರ್ಹತೆಗೆ ಧಕ್ಕೆ:ಮುಖ್ಯ ಆಯುಕ್ತ

ನವದೆಹಲಿ: 'ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳುಸುದ್ದಿಗಳ ಪ್ರಸಾರದಿಂದ ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಗೆ ಹೆಚ್ಚು ಧಕ್ಕೆ ಉಂಟಾಗಲಿದೆ' ಎಂದು ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್ ಅವರು ಗುರುವಾರ ಹೇಳಿದರು. 

'ಚುನಾವಣಾ ವ್ಯವಸ್ಥೆಯ ಪ್ರಮುಖ ಹಂತಗಳ ಸಂದರ್ಭಗಳನ್ನೇ ಗುರಿಯಾಗಿಸಿ ಸುಳ್ಳು ಸುದ್ದಿಗಳನ್ನು ಪ್ರಸರಣ ಮಾಡಲಾಗುತ್ತದೆ' ಎಂದು ಹೇಳಿದರು.

ಚುನಾವಣಾ ಆಯೋಗ ಇಲ್ಲಿ ಆಯೋಜಿಸಿದ್ದ ಅಂತರರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು. ವಿವಿಧ ರಾಷ್ಟ್ರಗಳ ಚುನಾವಣಾ ಆಯೋಗಗಳ ಪ್ರಮುಖರು ಭಾಗವಹಿಸಿದ್ದರು.

ಸಮ್ಮೇಳನದಲ್ಲಿ ಭಾಗವಹಿಸಿದ್ದ ಶ್ರೀಲಂಕಾ, ಉಜ್ಬೇಕಿಸ್ತಾನ, ಮಾರಿಷಸ್, ಇಂಡೊನೇಷ್ಯಾ, ಕಜಕಸ್ತಾನದ ಚುನಾವಣಾ ನಿರ್ವಹಣಾ ಸಂಸ್ಥೆಗಳ ಪ್ರತಿನಿಧಿಗಳು ಕೂಡ ಚುನಾವಣಾ ಪ್ರಕ್ರಿಯೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆಯಾಗುವ ಸುಳ್ಳು ಮಾಹಿತಿಗಳ ಕುರಿತು ಕಳವಳ ವ್ಯಕ್ತಪಡಿಸಿದರು.

ನಮೀಬಿಯಾ, ಇಂಡೊನೇಷ್ಯಾದ ಸಿಇಸಿಗಳು, ನಕಲಿ ಸುದ್ದಿಗಳ ಹಾವಳಿ ತಡೆಗೆ ತ್ವರಿತವಾಗಿ ಮಾಹಿತಿ ಹಂಚಿಕೊಳ್ಳಲು ಪ್ರತ್ಯೇಕ ವಾಟ್ಸ್‌ಆಯಪ್‌ ಚಾನಲ್‌ ಹೊಂದುವ ಸಾಧ್ಯತೆ ಕುರಿತ ಸಲಹೆ ಮುಂದಿಟ್ಟರು.

ತಮ್ಮ ಭಾಷಣದಲ್ಲಿ ರಾಜೀವ್ ಕುಮಾರ್ ಅವರು, ಕೃತಕಬುದ್ಧಿಮತ್ತೆ (ಎ.ಐ) ಬೆಂಬಲಿತ ಚುನಾವಣಾ ಪ್ರಕ್ರಿಯೆ, ಆನ್‌ಲೈನ್‌ ಮತದಾನ, ಗುರುತಿನ ಖಾತರಿಗೆ ಬಯೊಮೆಟ್ರಿಕ್‌ ಬಳಕೆ ಸಾಧ್ಯತೆ ಉಲ್ಲೇಖಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries