HEALTH TIPS

ಸ್ಪೇನ್‌ಗೆ ಜೈಶಂಕರ್‌ ಭೇಟಿ: ರಾಯಭಾರಿಗಳ ವಾರ್ಷಿಕ ಸಮ್ಮೇಳನದಲ್ಲಿ ಭಾಗಿ

 ಮ್ಯಾಡ್ರಿಡ್‌ : ಸ್ಪೇನ್‌ ಮತ್ತು ಐರೋಪ್ಯ ಒಕ್ಕೂಟದ ಜೊತೆಗಿನ ಭಾರತದ ಬಾಂಧವ್ಯವನ್ನು 'ಈ ಪ್ರಕ್ಷುಬ್ಧ ಸಂದರ್ಭದಲ್ಲಿ ಸ್ಥಿರಗೊಳಿಸಬೇಕಾದ ಅಗತ್ಯವಿದೆ' ಎಂದು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ ಪ್ರತಿಪಾದಿಸಿದರು.

ಮ್ಯಾಡ್ರಿಡ್‌ನಲ್ಲಿ ನಡೆಯುತ್ತಿರುವ ರಾಯಭಾರಿಗಳ 9ನೇ ವಾರ್ಷಿಕ ಸಮ್ಮೇಳನದಲ್ಲಿ ಮಾತನಾಡಿದ ಜೈಶಂಕರ್‌, 'ರಾಷ್ಟ್ರಗಳು ತಮ್ಮ ಸಂಸ್ಕೃತಿ, ಸಂಪ್ರದಾಯ ಹಾಗೂ ಪರಂಪರೆಯಿಂದ ತಮ್ಮ ವಿಶಿಷ್ಟ ರಾಜತಾಂತ್ರಿಕತೆಯನ್ನು ಮುಂದಿಡಲು ಹೇಗೆ ಪ್ರಯತ್ನಿಸುತ್ತವೆ' ಎಂಬುದನ್ನು ವಿವರಿಸಿದರು.

ವಿದೇಶಾಂಗ ಸಚಿವರಾದ ನಂತರ ಸ್ಪೇನ್‌ಗೆ ಮೊದಲ ಬಾರಿ ಭೇಟಿ ನೀಡಿರುವ ಜೈಶಂಕರ್‌, ಸೋಮವಾರದಿಂದ ಎರಡು ದಿನಗಳ ಪ್ರವಾಸ ಕೈಗೊಂಡಿದ್ದಾರೆ.

ಸ್ಪೇನ್‌ ಅಧ್ಯಕ್ಷ ಪೆದ್ರೊ ಭಾರತಕ್ಕೆ ಭೇಟಿ ನೀಡಿದ ಎರಡೂವರೆ ತಿಂಗಳ ನಂತರ ಜೈಶಂಕರ್‌ ಇಲ್ಲಿಗೆ ಭೇಟಿ ನೀಡಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries