HEALTH TIPS

ಕೊಲ್ಲಂ: ಫೋನ್‌ ಮೂಲಕ ತಲಾಖ್‌ ಹೇಳಿದ ವ್ಯಕ್ತಿಯ ಬಂಧನ

 ಕೊಲ್ಲಂ : ಫೋನ್‌ ಮೂಲಕ ಪತ್ನಿಗೆ ತ್ರಿವಳಿ ತಲಾಖ್‌ ಹೇಳಿದ ವ್ಯಕ್ತಿಯೊಬ್ಬನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.

ಕೊಲ್ಲಂ ಜಿಲ್ಲೆಯ ಮೈನಾಗಪಳ್ಳಿ ಮೂಲದ ಅಬ್ದುಲ್‌ ಬಾಸಿತ್‌ನನ್ನು ಎರಡು ದಿನಗಳ ಹಿಂದೆ ಬಂಧಿಸಲಾಗಿದ್ದು, 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ ಎಂದು ಪೊಲೀಸರು ಶನಿವಾರ ಹೇಳಿದರು.

'ಮೊದಲ ಮದುವೆ ಬಗ್ಗೆ ಮುಚ್ಚಿಟ್ಟು ಬಾಸಿತ್‌ ನನ್ನನ್ನು ವಿವಾಹವಾಗಿದ್ದರು. ಮೊದಲ ಪತ್ನಿ ಬಾಸಿತ್‌ನ ಸ್ವಂತ ಮನೆಯಲ್ಲಿದ್ದ ಕಾರಣ ನನ್ನನ್ನು ಬಾಡಿಗೆ ಮನೆಯಲ್ಲಿ ಇರಿಸಿದ್ದರು. ಮೊದಲ ಮದುವೆಯ ವಿಷಯ ತಿಳಿದು ನಾನು ಪ್ರಶ್ನಿಸಿದಾಗ, ನನಗೆ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡಲು ಆರಂಭಿಸಿದರು' ಎಂದು ಬಾಸಿತ್‌ ಪತ್ನಿ(20 ವಯಸ್ಸು) ದೂರಿನಲ್ಲಿ ಉಲ್ಲೇಖಿಸಿದ್ದಾರೆ.

'ಬೇರೆ ಮದುವೆಯಾಗುವುದಾಗಿಯೂ ಬಾಸಿತ್‌ ಬೆದರಿಕೆ ಒಡ್ಡಿದ್ದರು. ಇದರಿಂದ ಬೇಸತ್ತು ನನ್ನ ಪೋಷಕರ ಮನೆಗೆ ಹೋಗಿದ್ದೆ. ಜನವರಿ 19ರಂದು ಕರೆ ಮಾಡಿದ್ದ ಬಾಸಿತ್‌ ತ್ರಿವಳಿ ತಲಾಖ್‌ ಹೇಳಿದರು' ಎಂದು ಆರೋಪಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries