HEALTH TIPS

ಕ್ಷಮೆ ವಿಚಾರ | ರಾಜ್ಯದಲ್ಲಿ ಅಸ್ಥಿರತೆ ಬಯಸುವವರಿಂದ ರಾಜಕೀಯ: CM ಬಿರೇನ್‌ ಸಿಂಗ್

 ಇಂಫಾಲ್‌: 'ಜನಾಂಗೀಯ ಸಂಘರ್ಷ ಕುರಿತಂತೆ ನಾನು ಜನರ ಕ್ಷಮೆ ಕೋರಿದ್ದ ವಿಚಾರವಾಗಿ ರಾಜಕೀಯ ಮಾಡುತ್ತಿರುವವರು ರಾಜ್ಯದಲ್ಲಿ ಅಸ್ಥಿರತೆ ಮುಂದುವರಿಯಬೇಕು ಎಂಬುದಾಗಿ ಬಯಸುತ್ತಿದ್ದಾರೆ' ಎಂದು ಮಣಿಪುರ ಮುಖ್ಯಮಂತ್ರಿ ಎನ್‌.ಬಿರೇನ್‌ ಸಿಂಗ್‌ ಶುಕ್ರವಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ರಾಜ್ಯದಲ್ಲಿ ಶಾಂತಿ ಮರುಸ್ಥಾಪನೆ ನನ್ನ ಸರ್ಕಾರದ ಆದ್ಯತೆಯಾಗಿದೆ' ಎಂದರು.

'ಆಗಿದ್ದು ಆಗಿ ಹೋಯಿತು. ಎರಡೂ ಸಮುದಾಯದವರು ಒಟ್ಟಿಗೆ ಕುಳಿತು ಮಾತನಾಡಿ, ಈ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು' ಎಂದು ರಾಜ್ಯದ ವಿವಿಧ ಸಮುದಾಯಗಳಿಗೆ ಅವರು ಮನವಿ ಮಾಡಿದರು.

'ವಿರೋಧ ಪಕ್ಷಗಳಿಗೆ ಸಿದ್ಧಾಂತವೆಂಬುದೇ ಇಲ್ಲ. ನಾನು ದುಃಖಿತನಾಗಿರುವ ಬಗ್ಗೆ ಹೇಳಿದ್ದೆ. ತಮ್ಮವರನ್ನು ಕಳೆದುಕೊಂಡವರಿಗೆ ಹಾಗೂ ಜನಾಂಗೀಯ ಸಂಘರ್ಷದಿಂದಾಗಿ ನೋವು ಅನುಭವಿಸುತ್ತಿರುವವರಲ್ಲಿ ಕ್ಷಮೆ ಯಾಚಿಸಿದ್ದೆ' ಎಂದ ಅವರು, 'ಉಗ್ರರಲ್ಲಿ ನಾನೇಕೆ ಕ್ಷಮೆ ಯಾಚಿಸಲಿ' ಎಂದು ಪ್ರಶ್ನಿಸಿದರು.

'ರಾಜ್ಯದಲ್ಲಿರುವ ವಿವಿಧ ಸಮುದಾಯಗಳ ಜನರಿಗೆ ನಾನು ಶಾಂತಿಯ ಸಂದೇಶ ರವಾನಿಸಿದ್ದೇನೆ. ಹಳೆಯದನ್ನು ಮರೆಯಬೇಕು ಹಾಗೂ ಕ್ಷಮಿಸಬೇಕು. ಮಾತುಕತೆ ಮೂಲಕ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು' ಎಂದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries