HEALTH TIPS

ಮಾರ್ಚ್ 2 ರಂದು ಪಿ.ಪರಮೇಶ್ವರನ್ ಸ್ಮಾರಕ ಉಪನ್ಯಾಸ ನೀಡಲಿರುವ ಉಪರಾಷ್ಟ್ರಪತಿ ಜಗದೀಪ್ ಧಂಖರ್

ತಿರುವನಂತಪುರಂ: ಮಾರ್ಚ್ 2 ರಂದು ಬೆಳಿಗ್ಗೆ 11 ಕ್ಕೆ ಕವಡಿಯಾರ್ ಉದಯ ಅರಮನೆ ಸಮಾವೇಶ ಕೇಂದ್ರದಲ್ಲಿ ಉಪರಾಷ್ಟ್ರಪತಿ  ಜಗದೀಪ್ ಧಂಖರ್ ಅವರು ಪಿ.ಪರಮೇಶ್ವರನ್ ಸ್ಮಾರಕ ಉಪನ್ಯಾಸ ನೀಡಲಿದ್ದಾರೆ.


ಭಾರತೀಯ ವಿಚಾರ ಕೇಂದ್ರದ ಆಶ್ರಯದಲ್ಲಿ ಆಯೋಜಿಸಲಾದ ಈ ಉಪನ್ಯಾಸವು 'ಪ್ರಜಾಪ್ರಭುತ್ವ, ಜನಸಂಖ್ಯೆ, ಅಭಿವೃದ್ಧಿ ಮತ್ತು ಭಾರತದ ಭವಿಷ್ಯ' ಎಂಬ ವಿಷಯದ ಮೇಲೆ ನಡೆಯಲಿದೆ.

ಪರಮೇಶ್ವರ್‍ಜಿ ಫೆಬ್ರವರಿ 9, 2020 ರಂದು ಭಾರತೀಯ ವಿಚಾರ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿರುವಾಗ ನಿಧನರಾದರು. ಅವರು ಆರು ದಶಕಗಳ ಕಾಲ ಕೇರಳ ಸಾಂಸ್ಕøತಿಕ ರಂಗದಲ್ಲಿ ಸಕ್ರಿಯರಾಗಿದ್ದರು. ಭಾರತೀಯ ತತ್ತ್ವಶಾಸ್ತ್ರಗಳ ಅಧ್ಯಯನದ ಜೊತೆಗೆ, ಅವರು ಇತಿಹಾಸ ಮತ್ತು ಕಮ್ಯುನಿಸಂನಂತಹ ಸಿದ್ಧಾಂತಗಳಲ್ಲಿಯೂ ಸಾಕಷ್ಟು ಪರಿಣತಿ ಹೊಂದಿದ್ದರು. ಭಾರತೀಯ ವಿಚಾರ ಕೇಂದ್ರದ ವಾಗ್ಮಿ, ಬರಹಗಾರ ಮತ್ತು ಕವಿಯಾಗಿ ಪ್ರಸಿದ್ಧರಾಗಿದ್ದ ಅವರ ಸ್ಮರಣಾರ್ಥವಾಗಿ  ಪರಮೇಶ್ವರನ್ ಸ್ಮಾರಕ ಉಪನ್ಯಾಸವನ್ನು ಆಯೋಜಿಸಲಾಗುತ್ತಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries