ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಪಡನ್ನಕ್ಕಾಡ್ ಮೇಲ್ಸೇತುವೆ ಸನಿಹ ಬೈಕ್ ಮತ್ತು ಲಾರಿ ಡಿಕ್ಕಿಯಾಗಿ, ಬೈಕ್ ಸವಾರರಿಬ್ಬರು ದಾರುಣವಾಗಿ ಮೃತಪಟ್ಟಿದ್ದಾರೆ. ಕಾಞಂಗಾಡು ಹಳೇ ಕಡಪ್ಪುರ ನಿವಾಸಿ ಆಶಿಕ್(20)ಹಾಗೂ ಮೀನಾಪೀಸ್ ಕೋಟಿ ಎಂಬಲ್ಲಿ ವಾಸಿಸುವ, ಬೆಂಗಳೂರು ನಿವಾಸಿ ಬಾಬಾಪಕ್ರುದ್ದೀನ್ ಎಂಬವರ ಪುತ್ರ ತನ್ವೀರ್(35)ಮೃತಪಟ್ಟವರು.
ಶುಕ್ರವಾರ ರಾತ್ರಿ ಅಪಘಾತ ಸಂಬವಿಸಿದೆ. ಪಡನ್ನಕ್ಕಾಡ್ ಮೇಲ್ಸೇತುವೆ ಸನಿಹ ನಿಲ್ಲಿಸಿದ್ದ ಲಾರಿ ಮುಂಭಾಗದಿಂದ ಹೋಟೆಲ್ಗೆ ತೆರಳಲು ಬೈಕಲ್ಲಿ ಸಂಚರಿಸುತ್ತಿದ್ದಂತೆ ಲಾರಿ ಡಕ್ಕಿಯಾಗಿದೆ. ಎರಡು ಲಾರಿಗಳ ಮಧ್ಯೆ ಸಿಲುಕಿದ ಬೈಕಿನಲ್ಲಿದ್ದ ಯುವಕರಿಬ್ಬರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೊಸದುರ್ಗ ಠಾಣೆ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ವಆಹನಗಳನ್ನು ಬೇರ್ಪಡಿಸಿ ಮೃತದೇಹ ಹೊರ ತೆಗೆದಿದ್ದಾರೆ. ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.



