HEALTH TIPS

ನೆನ್ಮಾರ ಜೋಡಿ ಕೊಲೆ ಪ್ರಕರಣ: ತಪ್ಪೊಪಿಕೊಳ್ಳದ ಚೆಂತಾಮರ

ಪಾಲಕ್ಕಾಡ್: ನೆನ್ಮಾರ ಜೋಡಿ ಕೊಲೆ ಪ್ರಕರಣದಲ್ಲಿ ತಪ್ಪೊಪ್ಪಿಕೊಳ್ಳುವ ಬಗ್ಗೆ ಆರೋಪಿ ಚೆಂತಾಮರ ತನ್ನ ಮನಸ್ಸನ್ನು ಬದಲಾಯಿಸಿದ್ದಾನೆ. ತನ್ನ ವಕೀಲರೊಂದಿಗೆ ಮಾತನಾಡಿದ ನಂತರ ನಿಲುವು ಬದಲಾಯಿಸಲಾಗಿದೆ. ಚೆಂತಾಮರ ಅಪರಾಧವನ್ನು ಒಪ್ಪಿಕೊಂಡಿಲ್ಲ ಎಂದು ವಕೀಲ ಜಾಕೋಬ್ ಮ್ಯಾಥ್ಯೂ ಮಾಹಿತಿ ನೀಡಿದ್ದಾರೆ.


ಚೆಂತಾಮರನಿಗೆ ತಪ್ಪೊಪ್ಪಿಕೊಳ್ಳುವುದರ ಪರಿಣಾಮಗಳ ಬಗ್ಗೆ ಮೊದಲು ತಿಳಿದಿರಲಿಲ್ಲ. ಅದು ಮನವರಿಕೆಯಾದ ಬಳಿಕ, ತಪ್ಪೊಪ್ಪಿಕೊಳ್ಳದ ನಿಲುವನ್ನು ತೆಗೆದುಕೊಂಡನು ಎಂದು ವಕೀಲರು ಹೇಳಿರುವರು.

ತನಿಖಾ ತಂಡದ ಕೋರಿಕೆಯನ್ನು ಪರಿಗಣಿಸಿದ ನಂತರ ಪಾಲಕ್ಕಾಡ್ ಸಿಜೆಎಂ ನ್ಯಾಯಾಲಯವು ಚೆಂತಾಮರನ ಗೌಪ್ಯ ಹೇಳಿಕೆಯನ್ನು ತೆಗೆದುಕೊಳ್ಳುವಂತೆ ಆದೇಶಿಸಿತು. ಪಾಲಕ್ಕಾಡ್ ಸಿಜೆಎಂ ನ್ಯಾಯಾಲಯವು ಗೌಪ್ಯ ಹೇಳಿಕೆಯನ್ನು ದಾಖಲಿಸುವ ಜವಾಬ್ದಾರಿಯನ್ನು ಚಿತ್ತೂರು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವಹಿಸಿತು..



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries