HEALTH TIPS

ಗೋವನ್ನು ಪ್ರಾಣಿಗಳ ಪಟ್ಟಿಯಿಂದ ತೆಗೆದು, ರಾಷ್ಟ್ರ ಮಾತೆಯಾಗಿ ಘೋಷಿಸಿ: ಸ್ವಾಮೀಜಿ

ಮಹಾಕುಂಭ ನಗರ: ಉತ್ತರಾಖಂಡದ ಜ್ಯೋತಿಷ್ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಅವರು ಗೋಹತ್ಯೆ ನಿಷೇಧಿಸುವಂತೆ ಕೇಂದ್ರ ಸರ್ಕಾರಕ್ಕೆ 33 ದಿನಗಳ ಗಡುವು ನೀಡಿದ್ದಾರೆ.

ಇಲ್ಲಿನ ಸೆಕ್ಟರ್‌ 19ರಲ್ಲಿರುವ ಶಂಕರಾಚಾರ್ಯ ಶಿಬಿರದಲ್ಲಿ ಮಾಧ್ಯಮದವರೊಂದಿಗೆ ಮಂಗಳವಾರ ಮಾತನಾಡಿರುವ ಅವರು, 'ಗೋವಿನ ದೇಹದಲ್ಲಿ 33 ಕೋಟಿ ದೇವಾನುದೇವತೆಗಳು ನೆಲಸಿದ್ದಾರೆ ಎಂದು ಧರ್ಮಗ್ರಂಥಗಳಲ್ಲಿ ಉಲ್ಲೇಖಿಸಲಾಗಿದೆ.

ಗೋವನ್ನು 'ರಾಷ್ಟ್ರ ಮಾತೆ' ಎಂದು ಘೋಷಿಸಬೇಕೆಂದು ಒಂದೂವರೆ ವರ್ಷದಿಂದ ಆಂದೋಲನ ನಡೆಸುತ್ತಿದ್ದೇವೆ. ಇದೀಗ ನಾವು ಮಾಘಿ ಪೂರ್ಣಿಮೆಯ ಮರುದಿನದಿಂದ (ಗುರುವಾರದಿಂದ) 33 ದಿನಗಳ ಯಾತ್ರೆ ಆರಂಭಿಸಲು ನಿರ್ಧರಿಸಿದ್ದೇವೆ' ಎಂದು ಹೇಳಿದ್ದಾರೆ.

'ಈ ಯಾತ್ರೆಯು ಮಾರ್ಚ್‌ 17ರಂದು ದೆಹಲಿ ತಲುಪುವ ಮೂಲಕ ಕೊನೆಗೊಳ್ಳಲಿದೆ' ಎಂದಿರುವ ಅವರು, 'ನಿರ್ಧಾರ ತೆಗೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ 33 ದಿನಗಳ ಕಾಲಾವಕಾಶವಿದೆ. ಒಂದು ವೇಳೆ ಈ ಅವಧಿಯಲ್ಲಿ ತೀರ್ಮಾನ ಮಾಡದಿದ್ದರೆ, ಮಾರ್ಚ್‌ 17ರ ಸಂಜೆ 5ರ ನಂತರ ನಾವು ಕಠಿಣ ನಿರ್ಧಾರ ಮಾಡುತ್ತೇವೆ' ಎಂದು ಎಚ್ಚರಿಸಿದ್ದಾರೆ.

'ಗೋವನ್ನು ಪ್ರಾಣಿಗಳ ಪಟ್ಟಿಯಿಂದ ತೆಗೆದುಹಾಕಿ ರಾಷ್ಟ್ರ ಮಾತೆ ಎಂದು ಘೋಷಿಸಬೇಕು ಹಾಗೂ ಗೋಹತ್ಯೆಯನ್ನು ಅಪರಾಧವೆಂದು ಪರಿಗಣಿಸಬೇಕು ಎಂಬುದು ಕೇಂದ್ರ ಸರ್ಕಾರದ ಮುಂದೆ ನಾವು ಇಡುತ್ತಿರುವ ಬೇಡಿಕೆಯಾಗಿದೆ. ರಾಜ್ಯ ಸರ್ಕಾರವು ಗೋವನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಲು ಮುಂದಾಗಿದೆ. ಆದರೆ, ಅದರಲ್ಲಿಯೂ ಗೋವನ್ನು ಪ್ರಾಣಿ ಎಂದೇ ಕರೆಯುವುದಾದರೆ ಅದರ ಪ್ರಯೋಜನವೇನು?' ಎಂದು ಪ್ರಶ್ನಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries