ಬದಿಯಡ್ಕ: ರೋಟರಿ ಕನಸಿನ ಮನೆ ಯೋಜನೆಯ ಅಂಗವಾಗಿ ನಾರಂಪಾಡಿ ಪಿಲಿಕೂಡ್ಲು ಉಷಾಕುಮಾರಿ ಎಂಬವರಿಗೆ ಮಂಜೂರಾದ ಮನೆ ನಿರ್ಮಾಣಕಾರ್ಯಕ್ಕೆ ಶಿಲಾನ್ಯಾಸ ನಡೆಸಲಾಯಿತು. ರೋಟರಿ ಬದಿಯಡ್ಕ ನೇತೃತ್ವದಲ್ಲಿ ಕಾಮಗಾರಿಗಳು ನಡೆಯಲಿದ್ದು ಘಟಕ ಅಧ್ಯಕ್ಷ ಕೇಶವ ಪಾಟಾಳಿ ಬದಿಯಡ್ಕ ಅವರು ಭಾನುವಾರ ಬೆಳಗ್ಗೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿ, ರೋಟರಿ ಸಂಘಟನೆಯು ಅನೇಕ ಜನಪರ ಚಟುವಟಿಕೆಗಳನ್ನು ನಡೆಸುತ್ತಿದ್ದು, ಇದೀಗ ಘಟಕದ ಮೂಲಕ ಎರಡನೇ ಮನೆ ಮಂಜೂರಾಗಿದೆ. ಸೂರಿಲ್ಲದೆ ಜನರು ಕಷ್ಟಪಡಬಾರದು ಎಂಬ ಸದುದ್ದೇಶದಿಂದ ಕನಸಿನ ಮನೆ ಯೋಜನೆಯನ್ನು ರೋಟರಿ ಹಮ್ಮಿಕೊಂಡಿದೆ ಎಂದರು.
ಈ ಸಂದರ್ಭದಲ್ಲಿ ಚೆಂಗಳ ಗ್ರಾಮಪಂಚಾಯಿತಿ ಸದಸ್ಯ ಲತೀಫ್ ನಾರಂಪಾಡಿ, ರೋಟರಿ ಕಾರ್ಯದರ್ಶಿ ರಮೇಶ ಆಳ್ವ ಕಡಾರು, ಖಚಾಂಜಿ ಗೋಪಾಲಕೃಷ್ಣ ಕಾಮತ್, ಸದಸ್ಯ ಕೃಷ್ಣಪ್ರತೀಕ ಬೆಳ್ಳಿಗೆ ಹಾಗೂ ಸ್ಥಳೀಯರು ಪಾಲ್ಗೊಂಡಿದ್ದರು.




.jpg)

