HEALTH TIPS

ಬಾಂಗ್ಲಾದೇಶ | ತಸ್ಲೀಮಾ ಪುಸ್ತಕ ಮಾರಾಟ: ಮಳಿಗೆಗೆ ನುಗ್ಗಿ ದಾಂದಲೆ

ಢಾಕಾ: ಬಾಂಗ್ಲಾದೇಶದಿಂದ ಗಡೀಪಾರಾಗಿರುವ ಲೇಖಕಿ ತಸ್ಲೀಮಾ ನಸ್ರೀನ್ ಅವರ ಕೃತಿಗಳನ್ನು ಪುಸ್ತಕ ಮೇಳದಲ್ಲಿ ಮಾರಾಟಕ್ಕಿಟ್ಟಿದ್ದ ಮಳಿಗೆಯೊಂದರ ಮೇಲೆ ಪ್ರತಿಭಟನಕಾರರ ಗುಂಪೊಂದು ನಡೆಸಿದ್ದ ದಾಳಿ ಕುರಿತಂತೆ, ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮೊಹಮ್ಮದ್‌ ಯೂನುಸ್ ತನಿಖೆಗೆ ಆದೇಶಿಸಿದ್ದಾರೆ.

ಸಬ್ಯಸಾಚಿ ಪ್ರಕಾಶನವು 'ಅಮರ್‌ ಏಕುಶೆ ಪುಸ್ತಕ ಮೇಳ'ದಲ್ಲಿ ತಸ್ಲೀಮಾ ಅವರ ಕೃತಿಗಳನ್ನು ಪ್ರದರ್ಶನಕ್ಕಿಟ್ಟಿತ್ತು. ಇದನ್ನು ವಿರೋಧಿಸಿ 'ತೌಹಿದಿ ಜನತಾ' ಸಂಘಟನೆಯ ಕಾರ್ಯಕರ್ತರು ಮೇಳಕ್ಕೆ ನುಗ್ಗಿ, ದಾಂದಲೆ ನಡೆಸಿದ್ದಾರೆ. ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ ಎಂದು ಬಾಂಗ್ಲಾದೇಶದ 'ಬಿಡಿನ್ಯೂಸ್‌24' ವರದಿ ಮಾಡಿದೆ. ಈ ಬಗ್ಗೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

'ಬಾಂಗ್ಲಾ ಅಕಾಡೆಮಿ'ಯು ಘಟನೆ ಕುರಿತಂತೆ ತನಿಖೆ ನಡೆಸಲು ಏಳು ಸದಸ್ಯರ ಸಮಿತಿಯನ್ನು ರಚಿಸಿದ್ದು, ಮೂರು ದಿನಗಳೊಳಗೆ ವರದಿ ಸಲ್ಲಿಸುವಂತೆ ಸೂಚಿಸಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries