HEALTH TIPS

ಶಾಸಕಿ ಪ್ರತಿಭಾ ಪುತ್ರನ ವಿರುದ್ಧ ಪ್ರಕರಣ ದಾಖಲಿಸಿದ್ದ ಅಧಿಕಾರಿಗಳಿಂದ ಹೇಳಿಕೆ ತೆಗೆದುಕೊಂಡ ಉನ್ನತ ಅಧಿಕಾರಿ

ಅಲಪ್ಪುಳ: ಸಿಪಿಎಂ ಸಮ್ಮೇಳನದಲ್ಲಿ ಟೀಕೆಗಳು ವ್ಯಕ್ತವಾದ ನಂತರ, ಶಾಸಕಿ ಯು ಪ್ರತಿಭಾ ಅವರ ಪುತ್ರನ  ವಿರುದ್ಧ ಗಾಂಜಾ ಪ್ರಕರಣ ದಾಖಲಿಸಿದ್ದ ಅಧಿಕಾರಿಗಳಿಂದ ಉನ್ನತ ಅಧಿಕಾರಿಯೊಬ್ಬರು ಹೇಳಿಕೆ ಪಡೆದಿರುವರು.


ಗಾಂಜಾ ಪ್ರಕರಣದ ನೇತೃತ್ವ ವಹಿಸಿದ್ದ ಕುಟ್ಟನಾಡ್ ಅಬಕಾರಿ ಸಿಐ ಜಯರಾಜ್ ಮತ್ತು ರೇಂಜ್ ಇನ್ಸ್‍ಪೆಕ್ಟರ್ ಅನಿಲ್ ಕುಮಾರ್ ಅವರನ್ನು ಸಹಾಯಕ ಅಬಕಾರಿ ಆಯುಕ್ತರು ಆಲಪ್ಪುಳ ಅಬಕಾರಿ ಆಯುಕ್ತರ ಕಚೇರಿಗೆ ಕರೆಸಿ ಮಾಹಿತಿ ಪಡೆದಿರುವರು. ಆಯುಕ್ತ ಅಶೋಕ್ ಕುಮಾರ್ ಹೇಳಿಕೆ ಪಡೆದಿದ್ದಾರೆ. 

ಡಿಸೆಂಬರ್ 28 ರಂದು ಕುಟ್ಟನಾಡ್ ಅಬಕಾರಿ ತಂಡವು ಶಾಸಕರ ಪುತ್ರ ಕನಿವ್ ಸೇರಿದಂತೆ ಒಂಬತ್ತು ಜನರನ್ನು ಬಂಧಿಸಿ ಗಾಂಜಾ ಪ್ರಕರಣ ದಾಖಲಿಸಿತ್ತು. ನಂತರ ಅವರನ್ನು ಸ್ಟೇಷನ್ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿತ್ತು. ಈ ಸುದ್ದಿ ಹೊರಬಿದ್ದ ಕೂಡಲೇ ಯು ಪ್ರತಿಭಾ ಮಾಧ್ಯಮಗಳ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದ್ದರು. ಪಕ್ಷದ ಜಿಲ್ಲಾ ಸಮ್ಮೇಳನದಲ್ಲೂ ಈ ಘಟನೆಯ ಬಗ್ಗೆ ಗದ್ದಲ ಉಂಟಾಯಿತು. ಪ್ರತಿಭಾ ಉನ್ನತ ಅಧಿಕಾರಿಗಳಿಗೆ ದೂರು ನೀಡಿದರು. ಇದರ ಆಧಾರದ ಮೇಲೆ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries