HEALTH TIPS

ಕಾಸರಗೋಡು ನಗರದ ವ್ಯಾಪಾರ ಸಂಸ್ಥೆಯಲ್ಲಿ ದರೋಡೆ; ಪ್ರಣವ್ ಆಳ್ವ ಸಹಿತ ಇಬ್ಬರ ವಿರುದ್ಧ ದೂರು ದಾಖಲು

ಕಾಸರಗೋಡು: ಕಾಸರಗೋಡು: ಬ್ಯಾಂಕ್ ರಸ್ತೆಯ ಕೃಷ್ಣ ಬಿಲ್ಡಿಂಗ್ಸ್‍ನಲ್ಲಿ ಕಾರ್ಯನಿರ್ವಹಿಸುತ್ತಿರುವ  ವ್ಯಾಪಾರ ಸಂಸ್ಥೆಯಲ್ಲಿ ಕಳ್ಳತನ ಸಂಭವಿಸಿದ್ದು, ಮೋಟಾರ್ ಬೈಕ್ ಸೇರಿದಂತೆ ವಸ್ತುಗಳನ್ನು ಕಳವು ಮಾಡಲಾಗಿದೆ.  ಎರಡು ವಿದ್ಯುತ್ ಮೋಟಾರ್‍ಗಳು, ಒಂದು ನೀರಿನ ಟ್ಯಾಂಕ್, ಪಿವಿಸಿ ಪೈಪ್‍ಗಳು ಮತ್ತು ಅರವತ್ತು ಸಾವಿರ ರೂ.ಮೌಲ್ಯದ ಕಬ್ಬಿಣದ ಸ್ಟ್ಯಾಂಡ್ ಕಳ್ಳತನವಾಗಿದೆ.  


ಕಾಞಂಗಾಡ್ ಮೂಲದ ವ್ಯವಹಾರ ನಡೆಸುತ್ತಿರುವ ರಾಧಾಕೃಷ್ಣನ್ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಣವ್ ಆಳ್ವ ಕುಂಬಳೆ ಉಜಾರ್ ಮತ್ತು ಇತರ ಇಬ್ಬರ ವಿರುದ್ಧ ದೂರು ದಾಖಲಿಸಲಾಗಿದೆ.  ಈ ಘಟನೆ ಫೆ.13 ರ ರಾತ್ರಿ ನಡೆದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ನಗರ ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries