ಕಾಸರಗೋಡು: ಮಲಬಾರು ದೇವಸ್ವಂ ಮಂಡಳಿ ಅಧೀನದಲ್ಲಿರುವ ಕಾಸರಗೋಡು ಜಿಲ್ಲೆಯ ವಿವಿಧ ದೇವ್ಥಾನಗಳಿಗೆ ಪಾರಂಪರಿಕ ಟ್ರಸ್ಟಿಗಳ ನೇಮಕಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ಮಂಜೇಶ್ವರ ತಾಲೂಕಿನ ಮುಗು ಗ್ರಾಮದ ಮುಗು ಶ್ರೀ ಸುಬ್ರಾಯ ದೇವಸ್ಥಾನದಲ್ಲಿ 5 ಖಾಲಿ ಸಾಂಪ್ರಾದಾಯಿಕ ಟ್ರಸ್ಟಿಗಳ ಹುದ್ದೆಗಳಿಗೆ ದೇವಸ್ಥಾನದ ಸನಿಹ ವಾಸವಾಗಿರುವ ಹಿಂದೂ ಧರ್ಮೀಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಲಬಾರು ದೇವಸ್ವಂ ಮಂಡಳಿ ಅದಿನದಲ್ಲಿರುವ ಕಾಸರಗೋಡು ಜಿಲ್ಲೆ, ಹೊಸದುರ್ಗ ತಾಲೂಕಿನ ಕಯ್ಯೂರು ಗ್ರಾಮದ ಆಲಂತಟ್ಟ ಶ್ರೀ ಮಹಾ ವಿಷ್ಣು ಕ್ಷೇತ್ರದಲ್ಲಿ ತೆರವಾಗಿರುವ 5 ಸಾಂಪ್ರಾದಾಯಿಕ ಟ್ರಸ್ಟಿಗಳ ಹುದ್ದೆಗಳ ನೇಮಕಕ್ಕಾಗಿ ದೇವಸ್ಥಾನದ ಸಮೀಪ ವಾಸವಾಗಿರುವ ಹಿಂದೂ ಧರ್ಮೀಯರಿಂದ ಅರ್ಜಿ ಆಹ್ವಾನಿಸಲಾಗಿದೆ. ಅಲ್ಲದೆ ಮಲಬಾರು ದೇವಸ್ವಂ ಮಂಡಳಿ ಅದಿನದಲ್ಲಿರುವ ಕಾಸರಗೋಡು ಜಿಲ್ಲೆ, ಹೊಸದುರ್ಗ ತಾಲೂಕಿನ ನೀಲೇಶ್ವರ ಗ್ರಾಮದ ಪಳ್ಳಿಕ್ಕರ ಶ್ರೀ ಭಗವತಿ ಕ್ಷೇತ್ರದಲ್ಲಿ ತೆರವಾಗಿರುವ 3 ಸಾಂಪ್ರಾದಾಯಿಕ ಟ್ರಸ್ಟಿಗಳ ಹುದ್ದೆಗಳಿಗೆ ದೇವಸ್ಥಾನದ ಸಮೀಪ ವಾಸವಾಗಿರುವ ಹಿಂದೂ ಧರ್ಮೀಯರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಫಾರ್ಮ್ ಮಲಬಾರು ದೇವಸ್ವಂ ಮಂಡಳಿ ವೆಬ್ಸೈಟ್, ಸಹಾಯಕ ಆಯುಕ್ತರ ಕಚೇರಿ, ನೀಲೇಶ್ವರದಿಂದ ಲಭಿಸುವುದು. ಭರ್ತಿ ಮಾಡಿದ ಅರ್ಜಿಗಳನ್ನು ಫೆ. 15ರಂದು ಸಂಜೆ 5 ಗಂಟೆಯೊಳಗೆ ಮಲಬಾರು ದೇವಸ್ವಂ ಮಂಡಳಿ, ಕಾಸರಗೋಡು ವಿಭಾಗ ನೀಲೇಶ್ವರದ ಸಹಾಯಕ ಆಯುಕ್ತರ ಕಛೇರಿಗೆ ಸಲ್ಲಿಸುವಂತೆ ಪ್ರಕಟಣೆ ತಿಳಿಸಿದೆ.





